More

    ದವಸ-ಧಾನ್ಯ ಶೇಖರಿಸಲು ಯಾರನ್ನೂ ನೇಮಿಸಿಲ್ಲ

    ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಹೆಸರಿನಲ್ಲಿ ಕೆಲವರು ದವಸ-ಧಾನ್ಯಗಳ ಜತೆಗೆ ಕಾಣಿಕೆಯನ್ನೂ ದಾನವಾಗಿ ಪಡೆಯುತ್ತಿದ್ದು, ಮಠದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಹೀಗಾಗಿ ಅಂತಹ ಸನ್ನಿವೇಶ ಕಂಡು ಬಂದರೆ ಕೂಡಲೇ ಮಠವನ್ನು ಸಂಪರ್ಕಿಸಿ ಎಂದು ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಮನವಿ ಮಾಡಿದ್ದಾರೆ.

    ಶ್ರೀ ಮಠದ ವತಿಯಿಂದ ದವಸ-ಧಾನ್ಯಗಳನ್ನು ಶೇಖರಿಸಲು ಯಾರನ್ನೂ ನೇಮಕ ಮಾಡಿಲ್ಲ. ಮಠದ ಹೆಸರಿನಲ್ಲಿ ಅನ್ಯರು ಈ ರೀತಿ ಅಕ್ರಮವಾಗಿ ದಾನ ಪಡೆಯುತ್ತಿದ್ದು, ಇದಕ್ಕೂ ಮಠಕ್ಕೂ ಯಾವುದೇ ಸಂಬಂಧವಿಲ್ಲ. ಯಾರಾದರೂ ಮಠದ ಹೆಸರು ಹೇಳಿ ಈ ರೀತಿಯಾಗಿ ಬಂದರೆ ಮಠವನ್ನು ಸಂಪರ್ಕಿಸಿ ಅನುಮಾನ ಪರಿಹರಿಸಿಕೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ದಾಸೋಹಕ್ಕೆ ಅಗತ್ಯವಿರುವ ದವಸ-ಧಾನ್ಯವನ್ನು ಅನಿವಾರ್ಯತೆ ಇದ್ದರೆ ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಊರಿನ ಮುಖಂಡರ ಜತೆ ಚರ್ಚಿಸಿ ನಂತರ ಗ್ರಾಮ ಪ್ರವೇಶ ಮಾಡಲಾಗುವುದು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts