ಬೆಳಗಾವಿ; ಹುಕ್ಕೇರಿಯ ಶ್ರೀ ಕಾಡಸಿದ್ಧೇಶ್ವರ ಪಬ್ಲಿಕ್ ಶಾಲೆಯ ಆವರಣದಲ್ಲಿರುವಮಸ್ಟರಿಂಗ್ ಕೇಂದ್ರದ ಆವರಣಕ್ಕೆ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಭೇಟಿ ನೀಡಿದರು. ಈ ವೇಳೆ ಚುನಾವಣೆ ಸಿಬ್ಬಂದಿಗಾಗಿ ಆಯೋಜಿಸಿದ ಊಟದ ಕೌಂಟರ್ ಗೆ ಭೇಟಿ ಗುಣಮಟ್ಟ ಪರಿಶೀಲಿಸಿದರು. ಅಲ್ಲದೆ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ ಅವರು ಚುನಾವಣಾ ಸಿಬ್ಬಂದಿ ಜತೆ ಊಟ ಮಾಡಿದರು. ಯಮಕನಮರಡಿ ಚುನಾವಣಾಧಿಕಾರಿ ಬಲರಾಮ್ ಚವಾಣ್ ಮತ್ತಿತರರಿದ್ದರು.