ಬಿಹಾರ: ರಾಜ್ಯವನ್ನು ‘ಬಿಮಾರು’ ಆಗಿಸಿದ್ದವರಿಗೆ ಮತ ಚಲಾಯಿಸುವುದಿಲ್ಲ ಎಂದು ಬಿಹಾರದ ಜನತೆ ನಿರ್ಧರಿಸಿ ಆಗಿದೆ. ಬಿಹಾರದಲ್ಲಿ ಮತ್ತೆ ಎನ್ಡಿಎ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ ಎಂಬುದಾಗಿ ಎಲ್ಲ ಸಮೀಕ್ಷೆ, ವರದಿಗಳು ಹೇಳಿವೆ ಎಂದು ಮೋದಿ ಹೇಳಿದರು.
ಬಿಹಾರದ ಸಸಾರಾಮ್ನ ಬಿಯಾಡ ಮೈದಾನದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಮೋದಿ ಈ ವಿಷಯ ಹೇಳಿದರು. ಕರೊನಾ ವಿರುದ್ಧ ಬಿಹಾರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ಅವರು, ಬಿಹಾರ್ನಲ್ಲಿ ಕರೊನಾ ಎದುರಿಸುವ ನಿಟ್ಟಿನಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಆಗಿರದಿದ್ದರೆ ಇಷ್ಟರಲ್ಲಿ ಕಲ್ಪನೆಗೂ ನಿಲುಕದಷ್ಟು ಸಾವು ಸಂಭವಿಸಿರುತ್ತಿತ್ತು ಎಂದರು.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧರ ಪಾದಗಳಿಗೆ ತನ್ನ ಪ್ರಣಾಮಗಳು ಎಂದ ಮೋದಿ, ಇತ್ತೀಚೆಗಷ್ಟೇ ಅಗಲಿದ ಬಿಹಾರದ ಎಲ್ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಬಾಬು ರಘುವಂಶ್ ಪ್ರಸಾದ್ ಸಿಂಗ್ಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.