ನಾಯಕನಹಟ್ಟಿ: ಸಮೀಪದ ಮನುಮೈನಹಟ್ಟಿ ಗ್ರಾಮದ ಜಮೀನೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಬಿಳಿಜೋಳ ಮತ್ತು ನವಣೆ ಬೆಳೆಗೆ ಗುರುವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟುಹೋಗಿದೆ.
ಅಗ್ನಿಗೆ ಆಹುತಿಯಾದ ಬೆಳೆಯು ರೈತ ವೆಂಕಟೇಶ್ ಅವರಿಗೆ ಸೇರಿದೆ. ಇವರು ತಮ್ಮ 10 ಎಕರೆ ನೀರಾವರಿ ಜಮೀನಿನಲ್ಲಿ 4 ಎಕರೆಯಲ್ಲಿ ಬಿಳಿಜೋಳ, 2 ಎಕರೆಯಲ್ಲಿ ಬೆಳೆದಿದ್ದ ನವಣೆ ಬೆಳೆ ಕಟಾವು ಮಾಡಿ ಬಣವೆ ಹಾಕಿದ್ದರು. ಇದಕ್ಕೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಇಡೀ ಹೊಲಕ್ಕೆ ವ್ಯಾಪಿಸಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಚಳ್ಳಕೆರೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.