More

    ನಾಸೀರ್ ಪೆನಲ್ ಅಭ್ಯರ್ಥಿಗಳಿಂದ ಪ್ರಚಾರ

    ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸ್ಥಾನಗಳಿಗೆ ಅ.14ರಂದು ನಿಗದಿಯಾಗಿರುವ ಚುನಾವಣೆಗೆ ಸ್ಪರ್ಧೆಗಿಳಿದಿರುವ ನಾಸೀರ್ ಬಾಗವಾನ ನೇತೃತ್ವದ ಮಲಪ್ರಭಾ ಹಾಗೂ ಕಬ್ಬು ಬೆಳೆಗಾರರ ಹಿತರಕ್ಷಣಾ ಪೆನಲ್(ತಂಡ)ನ ಅಭ್ಯರ್ಥಿಗಳು ಭಾನುವಾರ ಭರ್ಜರಿ ಪ್ರಚಾರ ನಡೆಸಿದರು.

    ವಿವಿಧ ಗ್ರಾಮಗಳಿಗೆ ತೆರಳಿದ ಅಭ್ಯರ್ಥಿಗಳು, ಮತದಾನದ ಹಕ್ಕು ಪಡೆದಿರುವ ರೈತರ ಮನೆಗಳಿಗೆ ತೆರಳಿ ತಮ್ಮ ಪೆನಲ್(ತಂಡ)ನ ಅಭ್ಯರ್ಥಿಗಳಿಗೆ ಮತ ನೀಡುವಂತೆ ಕೋರಿದರು. ನಾವು ರಾಜಕೀಯ ಮಾಡುವುದಿಲ್ಲ. ರೈತರ ಕಷ್ಟ ನೋಡಿ ನಮಗೆ ಬೇಸರವಾಗಿದೆ.
    ರೈತರ ಅಭಿವೃದ್ಧಿ ನಮ್ಮ ಉದ್ದೇಶವಾಗಿದೆ. ಉದ್ಯಮಿ, ಜನಪರ ಸೇವಕ ನಾಸೀರ್ ಬಾಗವಾನ್ ತಂಡಕ್ಕೆ ಮತ ನೀಡಬೇಕು ಎಂದರು. ಅಭ್ಯರ್ಥಿಗಳಾದ ಅಶೋಕ ಯಮಕನಮರಡಿ, ಬಸವರಾಜ ಪುಂಡಿ, ಅಶೋಕ ಬೆಂಡಿಗೇರಿ, ಭರತೇಶ ಶೇಬಣ್ಣವರ, ಲಕ್ಷ್ಮೀ ಅರಳಿಕಟ್ಟಿ, ಮೀನಾಕ್ಷಿ ನೆಲಗಳಿ ಉಪಸ್ಥಿತರಿದ್ದರು.

    ಖಾನಾಪುರ ವರದಿ: ತಾಲೂಕಿನ ದೇವಲತ್ತಿ, ಕಾಮಶಿನಕೊಪ್ಪ, ಕೊಡಚವಾಡ, ಪಾರಿಶ್ವಾಡ, ಹಿರೇಮುನವಳ್ಳಿ ಹಾಗೂ ಇತರೆ ಗ್ರಾಮಗಳಲ್ಲಿ ಭಾನುವಾರ ಕಬ್ಬು ಬೆಳೆಗಾರರ ಹಿತರಕ್ಷಣಾ ಪೆನಲ್‌ನ ಮುಖಂಡರು ಮತ್ತು ಅಭ್ಯರ್ಥಿಗಳು ಪ್ರಚಾರ ನಡೆಸಿದರು. ತಾಲೂಕಿನ ಗಂದಿಗವಾಡ ಗ್ರಾಮದ ರೈತ ಮುಖಂಡ ಅಶೋಕ ಯಮಕನಮರಡಿ ನೇತೃತ್ವದಲ್ಲಿ ಪ್ರಚಾರ ನಡೆಸಿ ಮತ ಯಾಚಿಸಿದರು.

    ಲಕ್ಷ್ಮಣ ಎಮ್ಮಿ, ಜ್ಯೋತಿಬಾ ಹೈಬತ್ತಿ, ಬಸವರಾಜ ಪುಂಡಿ, ಬಸವರಾಜ ಬೆಂಡಿಗೇರಿ, ಮಂಜುನಾಥ ಪಾಟೀಲ, ಸಿದ್ಧಪ್ಪ ದೂರಪ್ಪನವರ, ಶಂಕರಗೌಡ ಪಾಟೀಲ, ಬಸಪ್ಪ ಸಾವಂತ ಸಂಜೀವ ಹುಬಳೆಪ್ಪನವರ, ಬಿಸ್ಟಪ್ಪ ಬನೋಶಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts