More

    ಸಕ್ಕರೆ ಮಾರಾಟ ಮಾಡಿ ಬಾಕಿ ವಿತರಣೆ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ

    ಮಂಡ್ಯ: ಎರಡು ಮೂರು ವರ್ಷದಿಂದ ಗೋದಾಮುನಲ್ಲಿ ಸಂಗ್ರಹಿಸಿಟ್ಟಿದ್ದ ಸಕ್ಕರೆಯನ್ನು ಮಾರಾಟ ಮಾಡಿ ಬಂದಂತಹ 8 ಕೋಟಿ ರೂಗಳನ್ನು ನಿವೃತ್ತಿ ನೌಕರರ ಪಿಂಚಣಿ, ಮೆಡಿಕಲ್ಗೆ ವಿನಿಯೋಗ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
    ನಗರದ ಮೈಶುಗರ್ ಕಾರ್ಖಾನೆಯ ಆವರಣದಲ್ಲಿ 4ನೇ ವೇಜ್ ಬೋರ್ಡ್ ಅರಿಯರ್ಸ್ ಚೆಕ್ ಅನ್ನು ವಿತರಿಸಿ ಮಾತನಾಡಿದರು. ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ಜತೆ ನಿರಂತರ ಪತ್ರ ವ್ಯವಹಾರ ನಡೆಸಲಾಗಿತ್ತು ಎಂದರು.
    ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕಾರ್ಮಿಕರೇ ಕಾರ್ಖಾನೆಯ ಜೀವಾಳ. ಆದ್ದರಿಂದ ಕಾರ್ಮಿಕರು ಹಾಗೂ ರೈತಾಪಿ ವರ್ಗದವರು ಮೈಶುಗರ್ ಕಾರ್ಖಾನೆಯ ಕಾರ್ಯನಿರ್ವಾಹಣೆಗಾಗಿ ಶ್ರಮಿಸಬೇಕು. 4ನೇ ವೇತನ ಮಂಡಳಿಯ ಸುಮಾರು 1,127 ನೌಕರರಿಗೆ ಬಾಕಿ ವೇತನ ಪಾವತಿ ಮಾಡಲು ಕ್ರಮ ವಹಿಸಲಾಗಿದೆ. 6.14 ಕೋಟಿ ರೂನಲ್ಲಿ 2.94 ಕೋಟಿ ರೂ ವಿತರಣೆ ಮಾಡಲು ಅನುಮತಿ ದೊರೆತಿದೆ. ಸಾಂಕೇತಿಕವಾಗಿ 15 ಜನಕ್ಕೆ ಚೆಕ್ ವಿತರಣೆ ಮಾಡಿದ್ದೇವೆ. ಉಳಿದಂತೆ ಎಲ್ಲ ಕಾರ್ಮಿಕರಿಗೆ 4ನೇ ವೇತನದ ಬಾಕಿಯು ಆರ್‌ಟಿಜಿಎಸ್ ಮೂಲಕ ಅವರ ಬ್ಯಾಂತೆಗೆ ಖಾತೆ ಜಮೆ ಮಾಡಲಾಗುವುದು. ಅಂತೆಯೇ ಜಿಲ್ಲೆಯ ರೈತರು ಕಬ್ಬು ಕಟಾವು ಮಾಡುವ ಸಂಸ್ಕೃತಿಯನ್ನು ಬೆಳಿಸಿಕೊಳ್ಳಬೇಕು. ಇದರಿಂದ ಬೇರೆ ಜಿಲ್ಲೆಯ ಕಾರ್ಮಿಕರ ಮೇಲೆ ಅವಲಂಬಿತರಾಗುವುದು ತಪ್ಪುತ್ತದೆ. ಮಾತ್ರವಲ್ಲದೆ ಹಣದ ಉಳಿತಾಯ ಸಹ ಆಗುತ್ತದೆ ಎಂದರು.
    ಮೈಶುಗರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಪ್ಪ ಸಾಹೇಬ್ ಪಾಟೀಲ್ ಮಾತನಾಡಿ, 4ನೇ ವೇತನ ಮಂಡಳಿಯ ಹಣ ಜಾರಿಯಾಗುವುದಕ್ಕೆ ಕಾರ್ಮಿಕರ ಸಂಘಟನೆಯ ಹೋರಾಟ ಕಾರಣ. ಅದಕ್ಕಾಗಿ ಅವರಿಗೆ ನನ್ನ ಧನ್ಯವಾದಗಳು. ರೈತರಿಗೆ ಹಾಗೂ ಕಬ್ಬು ಕಟಾವು ಮಾಡಿದವರಿಗೆ ಯಾವುದೇ ರೀತಿಯ ಹಣ ಕಾರ್ಖಾನೆಯಿಂದ ಬಾಕಿ ಉಳಿಸಿಕೊಂಡಿಲ್ಲ. ಮಂಡ್ಯ ಸಕ್ಕರೆ ನಾಡು ಎಂಬ ಹೆಸರನ್ನು ಅಳಿಸಲು ಯಾರಿಂದಲೂ ಆಗಿಲ್ಲ. ಅದಕ್ಕೆ ಈ ಭಾಗದ ರೈತಾಪಿ ವರ್ಗ ಕಾರಣ ಎಂದು ಹೇಳಿದರು.
    ಕಾರ್ಖಾನೆಯ ವೆಂಕಟೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts