ಬೆಂಗಳೂರು: ಕದ್ದ ಕಬ್ಬಿಣ ಮಾರಿದ ಹಣ ಹಂಚಿಕೊಳ್ಳುವ ವಿಚಾರಕ್ಕೆ ಜಗಳವಾಗಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಿಂಡ್ಲು ನಿವಾಸಿ ಪ್ರಭು (39) ಬಂಧಿತ. ಆರೋಪಿಯು ಮಲ್ಲೇಶ್ವರದ ಲಿಂಕ್ ರಸ್ತೆಯಲ್ಲಿ ಜು. ೮ರಂದು ರಾತ್ರಿ ಯಶವಂತಪುರದ ಗುರುಮೂರ್ತಿ (34) ಎಂಬ ವ್ಯಕ್ತಿಯ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ.
ಇದನ್ನೂ ಓದಿ: ರಜೆ ನಿರಾಕರಿಸಿದ್ದಕ್ಕೆ ಸೂಪರ್ ಮಾರ್ಕೆಟ್ಗೆ ಬೆಂಕಿ ಹಚ್ಚಿದ ಉದ್ಯೋಗಿ
ಸ್ನೇಹಿತರಾಗಿದ್ದ ಗುರುಮೂರ್ತಿ ಮತ್ತು ಪ್ರಭು ಒಟ್ಟಿಗೆ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಇಬ್ಬರು ಒಟ್ಟಾಗಿ ಜುಲೂ 8ರಂದು ಕಬ್ಬಿಣ್ಣ ಕದ್ದಿದ್ದರು. ಆ ಕಬ್ಬಿಣ್ಣ ಮಾರಿದ್ದರಿಂದ 500 ರೂ. ಬಂದಿತ್ತು. ಆ ಹಣ ಹಂಚಿಕೊಳ್ಳುವ ವಿಚಾರಕ್ಕೆ ಅವರಿಬ್ಬರ ನಡುವೆ ಜಗಳವಾಗಿತ್ತು. ಆಗ ಪ್ರಭು, ಗುರುಮೂರ್ತಿಯನ್ನು ಕೊಲೆ ಮಾಡಿದ್ದ. ಜಗಳ ಬಿಡಿಸಲು ಹೋದ ಆಟೋ ಚಾಲಕನಿಗೆ ಆರೋಪಿಯು ದೊಣ್ಣೆಯಿಂದ ಬೆದರಿಸಿ ನಂತರ ಸ್ಥಳದಿಂದ ಪರಾರಿಯಾಗಿದ್ದ.
ಆರಂಭದಲ್ಲಿ ಮೃತ ಗುರುಮೂರ್ತಿಯ ಗುರುತು ಪತ್ತೆಯಾಗಿರಲಿಲ್ಲ. ಜತೆಗೆ, ಆರೋಪಿಯ ಸುಳಿವು ಸಿಕ್ಕಿರಲಿಲ್ಲ. ಘಟನಾ ಸ್ಥಳದ ಸುತ್ತಮುತ್ತಲಿನ ಸಿ.ಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧರಿಸಿ ಆರೋಪಿ ಪ್ರಭುನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.