More

    ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಕಸಿಯಬೇಡಿ

    ಮುದ್ದೇಬಿಹಾಳ: ನೂರಾರು ವರ್ಷಗಳಿಂದ ಕನ್ನಡವೇ ಧರ್ಮ ಎಂದು ಜೀವನ ನಡೆಸುತ್ತಿರುವ ರಾಜ್ಯದ ಮರಾಠಾ ಸಮಾಜದವರ ಏಳಿಗೆಗೆ ಬಿಜೆಪಿ ಸರ್ಕಾರ ಮರಾಠಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಅದನ್ನು ಕಸಿದುಕೊಳ್ಳಬೇಡಿ ಎಂದು ಕ್ಷತ್ರೀಯ ಮರಾಠಾ ಸಮಾಜದ ತಾಲೂಕಾಧ್ಯಕ್ಷ ಪರಶುರಾಮ ಪವಾರ ವಿರೋಧಿಗಳಲ್ಲಿ ಮನವಿ ಮಾಡಿದರು.
    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಅಲ್ಲದೆ ಅನುದಾನವನ್ನೂ ಘೋಷಿಸಿದ್ದಾರೆ. ಇದು ಮುಳುಗುತ್ತಿರುವ ರಾಜ್ಯದ ಮರಾಠಾ ಸಮುದಾಯಕ್ಕೆ ಆಸರೆಯಾಗಿದೆ. ಮರಾಠಾ ನಿಗಮವನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದರು.
    ಮುಖಂಡರಾದ ಅರ್ಜುನ್ ನಲವಡೆ ಮಾತನಾಡಿ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸುವುದಾಗಿ ಹೇಳಿದರು.
    ಭರತ ಭೋಸಲೆ, ಹಣಮಂತ ನಲವಡೆ, ಶಿವಾಜಿ ಬಿಜಾಪುರ, ಶರಣು ಬೂದಿಹಾಳಮಠ, ಗಿರೀಶಗೌಡ ಪಾಟೀಲ, ನಾರಾಯಣ ನಲವಡೆ, ರಾಘು ನಲವಡೆ, ರಾಘವೇಂದ್ರ ಘಾಟಗೆ, ಆರ್.ಬಿ. ದೇಸಾಯಿ, ಅನೀಲ ಜಾಧವ, ಭೀಮಾಜಿ ಘಾಟಗೆ, ಸಂತೋಷ ಚವ್ಹಾಣ, ಶಂಭು ಕದಂ, ಗಜಾನನ ನಲವಡೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts