More

    ಮೂಡಲಗಿ-ಧರ್ಮಸ್ಥಳ ಬಸ್ ಆರಂಭ

    ಮೂಡಲಗಿ: ಕೆಎಸ್‌ಆರ್‌ಟಿಸಿಯು ಮೂಡಲಗಿಯಿಂದ-ಧರ್ಮಸ್ಥಳಕ್ಕೆ ನೂತನ ಬಸ್ ಸೇವೆ ಆರಂಭಿಸಿದ್ದು, ಸೋಮವಾರ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಚಾಲನೆ ನೀಡಿದರು.

    ಗೋಕಾಕ ಘಟಕ ವ್ಯವಸ್ಥಾಪಕ ಅಪ್ಪಣ್ಣ ಛಬ್ಬಿ ಮಾತನಾಡಿ, ಬಸ್ ಮೂಡಲಗಿಯಿಂದ ಮಧ್ಯಾಹ್ನ 3.15 ಗಂಟೆಗೆ ಹೊರಟು ಬೆಳಗ್ಗೆ 6.30ಕ್ಕೆ ಧರ್ಮಸ್ಥಳ ತಲುಪಲಿದೆ. ಮರಳಿ ಮಧ್ಯಾಹ್ನ 3.15ಕ್ಕೆ ಧರ್ಮಸ್ಥಳದಿಂದ ಹೊರಟು ಬೆಳಗ್ಗೆ 6ಕ್ಕೆ ಮೂಡಲಗಿ ತಲುಪಲಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ತಹಸೀಲ್ದಾರ್ ಶಿವಾನಂದ ಬಬಲಿ, ತಾಪಂ ಇಒ ಎ್.ಜಿ.ಚಿನ್ನವರ, ಬಿಇಒ ಅಜೀತ ಮನ್ನಿಕೇರಿ, ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ನಿರ್ದೇಶಕರ ರವೀಂದ್ರ ಸೋನವಾಲಕರ, ಅಬ್ದುಲ್ ಮೀರಜಾನಾಯ್ಕ, ಬಿ.ಬಿ.ದಂಡಾಪುರ, ಶ್ರೀಶೈಲ ದೇಸಾರಟ್ಟಿ, ಪ್ರಕಾಶ ಕಳಿಮನ್ನಿ, ಹನ್ೀ ಡಾಂಗೆ, ಕೆ.ಬಿ.ಗಿರೆಣ್ಣವರ, ರಾಜು ಮಗದುಮ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts