More

    ಶ್ರೀಲಂಕಾದಿಂದ ಎಂಎಸ್‌ಸಿ ಅರ್ಮೀನಿಯಾ ಹಡಗು ಆಗಮನ

    ಮಂಗಳೂರು: ನವಮಂಗಳೂರು ಬಂದರಿನ 14ನೇ ಬರ್ತ್‌ಗೆ ಭಾನುವಾರ ಸಾಯಂಕಾಲ ಮುಖ್ಯ ಕಂಟೇನರ್ ಹಡಗು ಶ್ರೀಲಂಕಾದಿಂದ ಎಂಎಸ್‌ಸಿ ಅರ್ಮೀನಿಯಾ ಆಗಮಿಸಿದ್ದು, ಜಲಫಿರಂಗಿಯ ಮೂಲಕ ಸ್ವಾಗತಿಸಲಾಯಿತು. ಇದರೊಂದಿಗೆ ಎನ್‌ಎಂಪಿಎ ಹೊಸದೊಂದು ಮೈಲಿಗಲ್ಲು ಸಾಧಿಸಿದೆ.

    276.5 ಮೀ. ಉದ್ದ ಮತ್ತು ನೀರಿನಡಿ 12.8 ಮೀ. ಆಳವಿದ್ದು, 1771 ಟಿಇಯುಗಳು ಮತ್ತು 1265 ಯುನಿಟ್ ಆಮದು ಕಂಟೇನರ್‌ಗಳನ್ನು ಹೊತ್ತು ತಂದಿದೆ.

    ಎನ್‌ಎಂಪಿಎ ಚೇರ್ಮನ್ ಡಾ.ವೆಂಕಟರಮಣ ಅಕ್ಕರಾಜು ಕಂಟೇನರ್ ಡಿಸ್ಚಾರ್ಜ್ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿಸಿದರು. ಜೆಎಸ್‌ಡಬ್ಲುೃ ಸಂಸ್ಥೆಯ ಎಚ್‌ಒಡಿ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಕ್ಯಾ.ಆರ್.ಡಿ.ಪಾಸ್ ಮತ್ತು ಕ್ಯಾ.ರಜನಿಕಾಂತ್ ಹಡಗಿನ ಪೈಲಟ್‌ಗಳಾಗಿದ್ದರು. ಲೋಡಿಂಗ್ ಪ್ರಕ್ರಿಯೆ ಮುಗಿದ ಬಳಿಕ ಸೋಮವಾರ ಅಥವಾ ಮಂಗಳವಾರ ಹಡಗು ನಿರ್ಗಮಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts