More

    ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಮಾದರಿ ಪರೀಕ್ಷೆ; ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಚಿವರ ಭೇಟಿ

    ಬೆಂಗಳೂರು : ಜುಲೈ 19 ರ ಸೋಮವಾರ ಮತ್ತು 22 ರ ಗುರುವಾರ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಅಣಕು‌ ಪರೀಕ್ಷೆ ಸಿದ್ಧತೆ ನಡೆಯಿತು. ಬೆಂಗಳೂರು ನಗರದ ಕೆಲವು ಪರೀಕ್ಷಾ ಕೇಂದ್ರಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

    ಮಲ್ಲೇಶ್ವರ 18ನೇ ಕ್ರಾಸ್​​ನ ಪರೀಕ್ಷಾ ಕೇಂದ್ರ, ಪೂರ್ಣಪ್ರಜ್ಞ ಶಾಲೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಸುಮಾರು 4,885 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಇದಕ್ಕಾಗಿ 73,066 ಕೊಠಡಿಗಳನ್ನು ಮೀಸಲಿಟ್ಟಿದ್ದೇವೆ ಎಂದರು.

    ಇದನ್ನೂ ಓದಿ: ಫೀಸ್ ಕಟ್ಟದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತಳಾಗುವ ಆತಂಕ: ವಿದ್ಯಾರ್ಥಿನಿ ಮನೆಗೇ ಬಂದ ಶಿಕ್ಷಣ ಸಚಿವರು

    ಇಂದು ಮತ್ತು ನಾಳೆ ಅಣಕು‌ ಪರೀಕ್ಷೆ ಸಿದ್ದತೆ ಮಾಡಲಾಗುತ್ತೆ. ಸಾಮಾಜಿಕ ಅಂತರ, ಮಾಸ್ಕ್, ಸೇರಿದಂತೆ ಎಲ್ಲ ಕ್ರಮ ತೆಗೆದುಕೊಳ್ಳಲಾಗ್ತಿದೆ. ಈ ವರ್ಷ ಓಎಂಆರ್ ಶೀಟ್ ಮೇಲೆ ಫೋಟೋ, ರೋಲ್ ನಂಬರ್ ಇರುತ್ತೆ. ಪ್ರತಿ ವಿಷಯಕ್ಕೆ ವಿಶೇಷ ಬಣ್ಣದ ಓಎಂಆರ್ ಇರಲಿದೆ ಎಂದರು.

    ಈ ವರ್ಷ 1,19,469 ಸಿಬ್ಬಂದಿಗಳು ಪರೀಕ್ಷಾ ಕೆಲಸ ನಿರ್ವಹಣೆ ಮಾಡಲಿದ್ದಾರೆ. ಪ್ರತಿ ಜಿಲ್ಲಾ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಅವರು ಎಸ್ಓಪಿ ಪಾಲನೆಗೆ ಕ್ರಮ ಕೈಗೊಳ್ಳಲಿದ್ದಾರೆ. ಪರೀಕ್ಷಾ ಕೇಂದ್ರಗಳು ಅತ್ಯಂತ ಸುರಕ್ಷಿತ ಕೇಂದ್ರಗಳಾಗಿ ಇರಲಿವೆ ಎಂದು ಭರವಸೆ ನೀಡಿದರು.

    ಇದನ್ನೂ ಓದಿ: ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಿವಿಮಾತು

    ಯಾವುದೇ ಮಗುವಿಗೂ ಸಮಸ್ಯೆ ಆಗೋದಿಲ್ಲ. ಪಾಲಕರು ಆತಂಕವಾಗೋದು ಬೇಡ. ವಿದ್ಯಾರ್ಥಿಗಳು ಕುಡಿಯುವ ನೀರು ತರಬೇಕು. ಅವರು ತರದೇ ಹೋದ್ರೆ ನಾವೇ ನೀರು ಕೊಡ್ತೀವಿ. ಯಾವುದೇ ಆತಂಕ ಇಲ್ಲದೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕೆಂದು ಮನವಿ ಮಾಡಿದರು.

    ಎಸ್ಸೆಸ್ಸೆಲ್ಸಿ: “ಯಾವುದೇ ಭಯ ಪಡದೆ ಪರೀಕ್ಷೆ ಬರೆಯೋಕೆ ಬನ್ನಿ”

    ‘ತೂಫಾನ್’ ಚಿತ್ರಕ್ಕೆ ಭರಪೂರ ಪ್ರಶಂಸೆ ನೀಡಿದ ಶಾರೂಖ್ ಖಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts