ಉಡುಪಿ: ಜಿಲ್ಲೆಯಲ್ಲಿ ಭಾವನಾತ್ಮಕ, ಬೌದ್ಧಿಕ, ಸಾಂಸತಿಕ ಜಗತ್ತು ಕಟ್ಟಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ ಕುಶಿ ಹರಿದಾಸ್ ಭಟ್ ಅವರ ಪುಸ್ತಕಗಳನ್ನು ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಮರುಮುದ್ರಣಗೊಳಿಸಲಾಗುವುದು. ಕುಶಿ ಮತ್ತು ಉಡುಪಿ ಎಂಬ ವಿಷಯದಲ್ಲಿ 1 ಗಂಟೆಗಳ ಸಾಕ್ಷ$್ಯ ಚಿತ್ರ ತಯಾರಿಸಲಾಗುವುದು ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಹೇಳಿದರು.
ಭಾನುವಾರ ಎಂಜಿಎಂ ಕಾಲೇಜಿನಲ್ಲಿ ಪ್ರೊ. ಕು.ಶಿ. ಹರಿದಾಸ್ ಭಟ್ ಅವರ ಜನ್ಮಶಮಾನೋತ್ಸವ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾತನಾಡಿದರು.
ಕುಶಿಯವರು ಸ್ಥಾಪಿಸಿದ ಪ್ರಾದೇಶಿಕ ಜಾನಪದ ಕೇಂದ್ರ ಜಿಲ್ಲೆಯ ಸಂಪನ್ಮೂಲ ಕೇಂದ್ರವಾಗಿ ಬೆಳೆದಿದ್ದು, ಇಷ್ಟು ವ್ಯವಸ್ಥಿತ ಕೇಂದ್ರ ಬೇರೆ ಯಾವುದೇ ರಾಜ್ಯದಲ್ಲಿಲ್ಲ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸುಮಾರು 38 ಭಾಷೆಗಳ 5 ಸಾವಿರ ಪುಸ್ತಕಗಳನ್ನು ಈ ಕಾಲೇಜಿಗೆ ತಂದು ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಿರುವುದು ಅಪೂರ್ವ ಕೆಲಸವಾಗಿದೆ. ಇಲ್ಲದಿದ್ದರೆ ಅಮೂಲ್ಯ ಬರಹಗಳು ಬೀದಿಪಾಲಾಗುತ್ತಿದ್ದವು ಎಂದರು.
ತುಳು ಭಾಷೆಗೆ ನಿಂಟು ಬೇಕು ಎಂಬ ನಿಟ್ಟಿನಲ್ಲಿ ವಿದೇಶದಲ್ಲಿದ್ದ ಉಪಾಧ್ಯಾಯ ದಂಪತಿಯನ್ನು ಇಲ್ಲಿಗೆ ಕರೆದುಕೊಂಡು ಬಂದು ಆ ಜವಾಬ್ದಾರಿಯನ್ನು ಹೊರೆಸಿದ್ದರು. ಹಣವೇ ಪ್ರಧಾನವಾಗಿರುವ ಈ ಕಾಲಟ್ಟದಲ್ಲಿ ಅವರು ವೃತ್ತಿಯ ತೃಪ್ತಿಗಾಗಿ ಕೆಲಸ ಮಾಡಿದ್ದು, ಕುರ್ಚಿ ಎತ್ತಿ ಇಡುವವನಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳುವ ಅರ್ಹತೆ ಪಡೆಯೋದಿಲ್ಲ ಎಂಬ ಮಾತಿಗೆ ಉದಾಹರಣೆಯಾಗಿದ್ದರು ಎಂದರು.
ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿ, ಕಲೆ, ಸಂಸತಿ ಉಳಿಸುವ ನಿಟ್ಟಿನಲ್ಲಿ ಕುಶಿಯವರು ಮಹತ್ವದ ಕೆಲಸಗಳನ್ನು ಮಾಡಿದ್ದು, ಅವರ ಬಹುಮುಖ ಪ್ರತಿಭೆ ಯು ಜನಾಂಗಕ್ಕೆ ಪ್ರೇರಣೆಯಾಗಲಿ ಎಂದು ಹೇಳಿದರು.
ಅಕಾಡೆಮಿ ಆ್ ಜನರಲ್ ಎಜುಕೇಶನ್ ಕಾರ್ಯದರ್ಶಿ ವರದರಾಯ ಪೈ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎನ್.ಟಿ. ಭಟ್, ಮೋಹನ್ ದಾಸ್ ಪೈ ಕೌಶಲ್ಯಾಭಿವೃದ್ಧಿ ಕೇಂದ್ರದ ನಿರ್ದೆಶಕ ಟಿ. ರಂಗ ಪೈ, ಎಂಜಿಎಂ ಪಪೂ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ, ಹಳೆ ವಿದ್ಯಾರ್ಥಿ ಸಂದ ಅಧ್ಯಕ್ಷ ಪ್ರೊ. ಸುರೇಂದ್ರನಾಥ ಶೆಟ್ಟಿ ಕೊಕ್ಕರ್ಣೆ, ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ, ಇಂದ್ರಾಳಿ ಯಕ್ಷಗಾನ ಕೇಂದ್ರ ಅಧ್ಯಕ್ಷ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ಕುಶಿಯವರ ಮಕ್ಕಳಾದ ಸುಜಾತಾ, ಜಯದೇವ, ಅನಂತ ಮೋಹನ್, ಹರ್ಷವರ್ಧನ್, ಆಶಾ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷಿ ನಾರಾಯಣ ಕಾರಂತ ಸ್ವಾಗತಿಸಿ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ನಾಯ್ಕ ವಂದಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಪುತ್ತಿ ವಸಂತಕುಮಾರ್ ಕಾರ್ಯಕ್ರಮ ನಿರೂಪಿಸಿದರು.