More

    ‘ಸತ್ಯ ಹೇಳಲು ಹೆದರದ ರಾಜಕಾರಣಿ ರಾಹುಲ್​ ಗಾಂಧಿ, ಇತಿಹಾಸ ಅವರನ್ನು ನೆನಪಿಸಿಕೊಳ್ಳುತ್ತದೆ’

    ಶ್ರೀನಗರ: ಕಾಂಗ್ರೆಸ್​ ಪಕ್ಷದ ನಾಯಕ ರಾಹುಲ್​ ಗಾಂಧಿಯವರನ್ನು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೊಗಳಿ ಟ್ವೀಟ್​ ಮಾಡಿದ್ದಾರೆ. ದೇಶದ ರಾಜಕೀಯದಲ್ಲಿ ಸತ್ಯ ಹೇಳಲು ಹೆದರದ ರಾಜಕಾರಣಿ ಎಂದರೆ ಅದು ರಾಹುಲ್​ ಗಾಂಧಿ ಎಂದು ಅವರು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

    ನೂತನ ಭಾರತವು ಆಯ್ದ ಕೆಲವೇ ಕೆಲವು ಬಂಡವಾಳಶಾಹಿಗಳ ಹಿಡಿತದಲ್ಲಿದೆ ಎನ್ನುವುದು ಸತ್ಯವಾದ ಮಾತು. ರಾಹುಲ್​ ಗಾಂಧಿ ಅವರ ಬಗ್ಗೆ ಯಾರು ಏನು ಹಾಸ್ಯವನ್ನಾದರೂ ಮಾಡಬಹುದು ಆದರೆ ಅವರು ಸತ್ಯವನ್ನು ಮಾತನಾಡುವ ಧೈರ್ಯಶಾಲಿ ರಾಜಕಾರಣಿ. ಪ್ರಸ್ತುತ ಆಡಳಿತದಲ್ಲಿರುವ ಸರ್ವಾಧಿಕಾರಿಗಳ ವಿರುದ್ಧ ನಿಂತಿದ್ದಕ್ಕೆ ಇತಿಹಾಸ ಅವರನ್ನು ನೆನಪಿಸಿಕೊಳ್ಳಲಿದೆ ಎಂದು ಮುಫ್ತಿ ಅವರು ಟ್ವೀಟ್​ ಮಾಡಿದ್ದಾರೆ.

    ಇನ್ನೊಂದು ಟ್ವೀಟ್​ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಅವರು, “ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳ (ಎನ್​ಐಎ)ವನ್ನು ಕೃಷಿ ಕಾಯ್ದೆಯ ವಿರುದ್ಧ ಹೋರಾಡುತ್ತಿರುವ ರೈತರ ಮೇಲೆ ಪ್ರಯೋಗಿಸುತ್ತಿದೆ. ಕಾಶ್ಮೀರಿಗಳು, ರೈತರು ಮತ್ತು ಸರ್ಕಾರದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರ ಮೇಲೆ ಎನ್​ಐಎ ತೆಗೆದುಕೊಳ್ಳುತ್ತಿರುವ ಕ್ರಮವನ್ನು ನೋಡಿದರೆ ಸಂಸ್ಥೆ ಎಷ್ಟು ಹಾಳಾಗಿದೆ ಎನ್ನುವುದುನ್ನು ಹೇಳಬಹುದು” ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಕೊನೆಯುಸಿರೆಳೆವ ಮುನ್ನ ಐವರಿಗೆ ಹೊಸ ಜೀವನ ಕೊಟ್ಟ 20 ತಿಂಗಳ ಮಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts