More

    ಮಗನಿಗಾಗಿ ಸಿನಿಮಾ… ತಾಯಿ ಖುಷಿ ನೋಡಿ ಆತ ಬೆಳೆಯಬೇಕೆಂದ ಮೇಘನಾ

    ಬೆಂಗಳೂರು: ‘ಮತ್ತೆ ಸಿನಿಮಾ ಒಪ್ಪಿಕೊಂಡಿರುವುದು ನನ್ನ ಕಂದ ರಾಯನ್​ಗೋಸ್ಕರ. ತಾಯಿ ಖುಷಿಯಿಂದ ಇದ್ದಾಳೆ ಎಂಬುದನ್ನು ನೋಡಿ ಆತ ಬೆಳೆಯಬೇಕು ಎಂಬ ಒಂದು ಕಾರಣಕ್ಕೆ’- ಹೀಗೆ ಸಿನಿಮಾ ಕಮ್್ಯಾಕ್ ಬಗ್ಗೆ ಹೇಳಿಕೊಳ್ಳುತ್ತಾರೆ ನಟಿ ಮೇಘನಾ ರಾಜ್ ಸರ್ಜಾ.

    ಕಳೆದ ಒಂದೂವರೆ ವರ್ಷದಲ್ಲಿ ಮೇಘನಾ ಸರ್ಜಾ ಬಾಳಲ್ಲಿ ಒಂದಷ್ಟು ಕಹಿ ಮತ್ತು ಸಿಹಿ ಅನುಭವಗಳಾಗಿವೆ. ಅದೆಲ್ಲವನ್ನು ಮರೆತು ಇದೀಗ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಪನ್ನಗ ಭರಣ ಮೊದಲ ಸಲ ಪಿಬಿ ಸ್ಟುಡಿಯೋಸ್ ಬ್ಯಾನರ್​ನಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದು, ಪ್ರಧಾನ ಪಾತ್ರದಲ್ಲಿ ಮೇಘನಾ ಕಾಣಿಸಿಕೊಳ್ಳಲಿದ್ದಾರೆ. ಆ ಅನುಭವವನ್ನು ಅವರೇ ಹೇಳಿಕೊಂಡಿದ್ದಾರೆ.

    ‘ನನಗೆ ಮೊದಲ ಚಿತ್ರಕ್ಕೆ ಬಣ್ಣ ಹಚ್ಚಿದ ಅನುಭವ ಆದಂತಿದೆ. ಅದೇ ಭಯ ಶುರುವಾಗಿದೆ. ರಾತ್ರಿಯಿಡೀ ನಿದ್ದೆಯೂ ಇಲ್ಲ. ದೊಡ್ಡ ಜವಾಬ್ದಾರಿಯನ್ನು ಪನ್ನಗ ನನ್ನ ಮೇಲೆ ಹೊರಿಸಿದ್ದಾನೆ. ಅದೇ ರೀತಿ ಅಚ್ಚುಕಟ್ಟಾದ ಕಥೆಯನ್ನು ನಿರ್ದೇಶಕ ವಿಶಾಲ್ ಸಿದ್ಧಪಡಿಸಿದ್ದಾರೆ. ನಾನು ಇಲ್ಲಿಯವರೆಗೂ ಹಲವು ಭಾಷೆಗಳಲ್ಲಿ ನಟಿಸಿರಬಹುದು. ಆ ಎಲ್ಲ ಸಿನಿಮಾಗಳಿಗಿಂತ ವಿಶೇಷವಾದ ಪಾತ್ರವಿದು. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಚಿತ್ರ ಎಂದಷ್ಟೇ ಹೇಳುವೆ’ ಎಂದು ಪಾತ್ರದ ಗುಟ್ಟನ್ನು ಮುಚ್ಚಿಡುತ್ತಾರವರು.

    ಚಿರು, ಪ್ರಜ್ವಲ್ ನಟಿಸಬೇಕಿತ್ತು: ಈ ಸಿನಿಮಾಕ್ಕೂ ಮೊದಲು ಪನ್ನಗ ಬೇರೆ ಸಿನಿಮಾ ನಿರ್ವಣಕ್ಕೆ ಮುಂದಾಗಿದ್ದರಂತೆ. ಅದೂ ಚಿರು ಜತೆ ಎಂದರೆ ವಿಶೇಷ. ‘ಪನ್ನಗ ಭರಣ ನಿರ್ವಣದ ಮೊದಲ ಸಿನಿಮಾದಲ್ಲಿ ಚಿರು ಮತ್ತು ಪ್ರಜ್ವಲ್ ದೇವರಾಜ್ ನಟಿಸಬೇಕಿತ್ತು. ಆದರೆ, ಆ ಸದವಕಾಶ ನನಗೆ ಸಿಕ್ಕಿದೆ. ಕ್ಯಾಮರಾ ಮುಂದೆ ನಿಲ್ಲದೆ ವರ್ಷಗಳೇ ಕಳೆದಿವೆ. ನನ್ನನ್ನು ನಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎಲ್ಲವನ್ನು ಮರೆತು ಕ್ಯಾಮರಾ ಮುಂದೆ ನಿಂತಾಗ, ನನ್ನಷ್ಟು ಖುಷಿಯಾಗಿರುವವರು ಯಾರು ಇಲ್ಲ. ಇದೀಗ ಈ ಅವಕಾಶವನ್ನು ಚಿರುವೇ ನನಗೆ ಕೊಡಿಸಿದ್ದಾನೆ’ ಎಂಬುದು ಮೇಘನಾ ಮಾತು.

    ನಾನು ಏನೇ ಮಾಡಿದರೂ ಅದು ಮಗ ರಾಯನ್​ಗಾಗಿ..

    ‘ಸದ್ಯಕ್ಕೆ ಸಿನಿಮಾ ವೃತ್ತಿಜೀವನ ಹೇಗೆ ಹೋಗುತ್ತದೆಯೋ, ಅದೇ ರೀತಿ ನನ್ನ ಪ್ರಯಾಣ ಸಾಗಲಿದೆ. ನಾನು ಯಾವುದನ್ನೂ ಪ್ಲಾನ್ ಮಾಡಿಲ್ಲ. ಹಾಗಂತ ನಾನೇನು ಯುದ್ಧಕ್ಕೆ ನಿಂತಿಲ್ಲ. ಎಲ್ಲರ ಜೀವನದಲ್ಲಿ ಹೇಗೆ ಸವಾಲುಗಳಿರುತ್ತವೆಯೋ, ನನ್ನ ಜೀವನದಲ್ಲಿಯೂ ಇವೆ. ನಾನು ಏನೇ ಮಾಡಿದರೂ ಅದು ರಾಯನ್​ಗೋಸ್ಕರ. ನಾನು ಏನೇ ನಿರ್ಧಾರ ತೆಗೆದುಕೊಂಡರೂ, ಆತನನ್ನು ಗಮನದಲ್ಲಿಟ್ಟುಕೊಂಡೇ ತೆಗೆದುಕೊಂಡಿರುತ್ತೇನೆ’ ಎನ್ನುತ್ತಾರೆ ಮೇಘನಾ.

    ಚಿರುಗೆ ನನ್ನದೇ ಮೊದಲ ವಿಶ್

    ‘ಚಿರು ನನಗೆ ಪರಿಚಯ ಆದಾಗಿನಿಂದ, ನಮ್ಮ ನಡುವೆ ಪ್ರೀತಿಯ ಮೊಳಕೆವೊಡೆದಾಗ, ಆತನ ಪ್ರತಿ ಹುಟ್ಟುಹಬ್ಬಕ್ಕೆ ನನ್ನದೇ ಮೊದಲ ಶುಭಾಶಯ ಇರುತ್ತಿತ್ತು. ರಾತ್ರಿ ಬೇರೆ ಯಾರಾದರೂ ಕರೆ ಮಾಡಿದ್ದರೆ, ಜಗಳವಾಡುತ್ತಿದ್ದೆ. ಈಗಲೂ ಅದನ್ನೇ ಮಾಡಿದ್ದೇನೆ. ನನ್ನ ಪಾಲಿನ ವಿಶ್ ಚಿರುಗೆ ತಲುಪಿದೆ’ ಎಂದು ಚಿರುವನ್ನು ನೆನಪು ಮಾಡಿಕೊಂಡರು ಮೇಘನಾ.

    ರಾಜಮಾರ್ತಾಂಡ ಟೀಸರ್

    ಚಿರಂಜೀವಿ ಸರ್ಜಾ ಜನ್ಮದಿನದ ಪ್ರಯುಕ್ತ ಅವರ ಕೊನೇ ಸಿನಿಮಾ ‘ರಾಜಮಾರ್ತಾಂಡ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ರಾಮ್ಾರಾಯಣ್ ನಿರ್ದೇಶನದ ಈ ಚಿತ್ರದಲ್ಲಿ ಚಿರುಗೆ ದೀಪ್ತಿ ಸತಿ ನಾಯಕಿಯಾಗಿ ನಟಿಸಿದ್ದು, ಶಿವಕುಮಾರ್ ಈ ಚಿತ್ರದ ನಿರ್ವಪಕರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts