More

    ಮಟ್ಕಾ ದಂಧೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ ಪೊಲೀಸ್​ ಮೇಲೇ ಹಲ್ಲೆ

    ಬೀದರ್: ಮಟ್ಕಾ ದಂಧೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದ ಪೊಲೀಸ್ ಪೇದೆಯೊಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಬೀದರ್​ ಜಿಲ್ಲೆಯ ಔರಾದ್ ಪೊಲೀಸ್ ಠಾಣೆಯ ಹೆಡ್​​ಕಾನ್ಸ್​ಟೆಬಲ್ ಸಂಗಮೇಶ್ ನಿಟ್ಟೂರೆ ಮೇಲೆ ಹಲ್ಲೆ ನಡೆದಿದೆ.

    ಔರಾದ್ ತಾಲೂಕಿನ ಹಲವೆಡೆ ಮಟಕಾ ದಂಧೆ ನಡೆಯುತ್ತಿದ್ದು, ಈ ಅಕ್ರಮದ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂಗಮೇಶ್​ರನ್ನು ಶಿವಶಂಕರ್​ ಮಳಗೆಮನೆ ಎಂಬಾತ ಕರೆಸಿಕೊಂಡು, ಇತರ ನಾಲ್ವರೊಂದಿಗೆ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಈ ಹಿನ್ನೆಲೆಯಲ್ಲಿ ಮಟಕಾ ಬುಕ್ಕಿಗಳಾದ ಶಿವಶಂಕರನನ್ನು ದಸ್ತಗಿರಿ ಮಾಡಲಾಗಿದೆ. ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಜರಂಗ ಮತ್ತು ಇತರ ಇಬ್ಬರು ಆರೋಪಿಗಳ ಪತ್ತೆ ಕಾರ್ಯ ನಡೆದಿದೆ ಎಂದು ಬೀದರ್ ಎಸ್ಪಿ ಡಿ.ಎಲ್​.ನಾಗೇಶ್ ತಿಳಿಸಿದ್ದಾರೆ.

    ನಾಲ್ಕನೇ ದಿನವೂ ಏರಿದ ಇಂಧನ ಬೆಲೆ: 3 ನಗರಗಳಲ್ಲಿ 100 ರೂಪಾಯಿ ದಾಟಿದ​ ಡೀಸಲ್!

    ಬ್ರೌನ್​ ಶುಗರ್​ ಮಾರುತ್ತಿದ್ದಾಗ ಸಿಕ್ಕಿಬಿದ್ದ ಖದೀಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts