ಮಥುರಾ: ಹಾಥರಸ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಕೇರಳದ ಪತ್ರಕರ್ತ ಮತ್ತು ಇತರ ಮೂವರ ನ್ಯಾಯಾಂಗ ಬಂಧನದ ಅವಧಿಯನ್ನು ನವೆಂಬರ್ 2 ರ ತನಕ ಮತ್ತೆ ವಿಸ್ತರಿಸಿದೆ. ಪತ್ರಕರ್ತ ಸಿದ್ದಿಕ್ ಕಪ್ಪನ್ ಮತ್ತು ಇತರೆ ಮೂವರು ಹಾಥರಸ್ ಸಂತ್ರಸ್ತೆಯ ಮನೆಗೆ ಹೋಗುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದರು. ನಾಲ್ವರ ವಿರುದ್ಧ ಉದ್ದೇಶಪೂರ್ವಕ ಅಪರಾಧ ಎಸಗುವ ಉದ್ದೇಶ, ರಾಷ್ಟ್ರದ್ರೋಹ ಮತ್ತು ಇತರೆ ಕೆಲವು ಭಯೋತ್ಪಾದನಾ ನಡವಳಿಕೆಗಳ ಆರೋಪ ಹೊರಿಸಲಾಗಿದೆ.
ಬಂಧಿತರನ್ನು ಅಕ್ಟೋಬರ್ ಏಳರಂದು ಕೋರ್ಟ್ಗೆ ಹಾಜರುಪಡಿಸಿದ್ದ ವೇಳೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇಂದು ಮತ್ತೆ ಆರೋಪಿಗಳನ್ನು ಮಥುರಾ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಂಜು ರಜಪೂತ್ ಅವರ ಸಮಕ್ಷಮ ವಿಡಿಯೋ ಕಾನ್ಫರೆನ್ಸ್ ಮೂಲಕ ನಿಲ್ಲಿಸಿದಾಗ, ಪೊಲೀಸ್ ವಿಚಾರಣೆ ಇನ್ನೂ ಮುಗಿದಿಲ್ಲ ಎಂದು ಎಪಿಒ ಬ್ರಜಮೋಹನ್ ಸಿಂಗ್ ಹೇಳಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು ನವೆಂಬರ್ 2 ರ ತನಕ ನ್ಯಾಯಾಂಗ ಬಂಧನ ಅವಧಿ ಮುಂದುವರಿಸಿದರು.
ಇದನ್ನೂ ಓದಿ: ‘ಮಹಾರಾಷ್ಟ್ರದಲ್ಲಿ ಹೆಚ್ಚಾಗ್ತಿದೆ ‘ಲವ್ ಜಿಹಾದ್’ ಕೇಸ್ಗಳು’!
ಅತೀಖುರ್ ರಹಮಾನ್, ಆಲಂ ಮತ್ತು ಮಸೂದ್ ಪತ್ರಕರ್ತ ಸಿದ್ದಿಕ್ ಕಪ್ಪನ್ ಜತೆಗಿರುವ ಇತರೆ ಮೂವರು ಆರೋಪಿಗಳು. ಹಾಥರಸ್ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಕೈವಾಡ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಆ ಸಂಘಟನೆ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಸಂಘಟನೆಗಳೊಂದಿಗೆ ಇವರಿಗೆ ನಂಟಿದೆ ಎಂಬ ಆರೋಪವನ್ನೂ ಪೊಲೀಸರು ಹೊರಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ದೇಶದ ಮೊದಲ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ಗೆ ಶಂಕುಸ್ಥಾಪನೆ ನೆರವೇರಿಸಿದ್ರು ಸಚಿವ ಗಡ್ಕರಿ