More

    ಜೋಳದ ಬಣವಿಗಳಿಗೆ ಬೆಂಕಿ

    ಮಾನ್ವಿ: ತಾಲೂಕಿನ ದೇವಿಪುರದಲ್ಲಿ ಗುರುವಾರ ತಡರಾತ್ರಿ ಬೆಂಕಿ ಆಕಸ್ಮಿಕದಿಂದ 300 ಎಕರೆಯಲ್ಲಿದ್ದ ಜೋಳದ ಬಣವಿಗಳು ಸುಟ್ಟು ಹೋಗಿದೆ. ಗೋಶಾಲೆಗಳಿಗೆಂದು ಈ ಬಣವಿಗಳಲ್ಲಿ ಮೇವು ಸಂಗ್ರಹಿಸಲಾಗಿತ್ತು. ಜಾನುವಾರುಗಳಿಗೆಂದು ರೈತ ಸುಬ್ಬಾರಾವ್‌ರೆಡ್ಡಿ ಮತ್ತು ನಾರಾಯಣಪ್ಪ ಸಂಗ್ರಹಿಸಿದ್ದ ಲಕ್ಷಾಂತರ ರೂ. ಮೌಲ್ಯದ ಮೇವು ಸಂಪೂರ್ಣವಾಗಿ ಸುಟ್ಟಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸಪಟ್ಟರೂ ಪ್ರಯೋಜನವಾಗಿಲ್ಲ. ಘಟನೆ ಕುರಿತಂತೆ ಕಂದಾಯ ಅಧಿಕಾರಿಗಳು ವರದಿ ಸಂಗ್ರಹಿಸಿದ್ದು ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts