ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ತೆರಿಗೆ ಕಟ್ಟದೆ ಕಳ್ಳಾಟ ಆಡುತ್ತಿರುವ ಮಂತ್ರಿ ಮಾಲ್ಗೆ ಬಿಬಿಎಂಪಿ ಶಾಕ್ ನೀಡಿದೆ. ಮಂತ್ರಿ ಮಾಲ್ನ ಚರಾಸ್ತಿಗಳನ್ನು ಬಿಬಿಎಂಪಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು.
ಸುಮಾರು 43 ಕೋಟಿ ರೂ. ತೆರಿಗೆಯನ್ನು ಹಲವು ವರ್ಷಗಳವರೆಗೆ ಬಿಬಿಎಂಪಿ ಬಾಕಿ ಉಳಿಸಿಕೊಂಡಿತ್ತು. ಈ ಹಿಂದೆ ಎರಡು ಬಾರಿ ಮಂತ್ರಿಮಾಲ್ಗೆ ಬಿಬಿಎಂಪಿ ಬೀಗ ಜಡಿದಿತ್ತು. ತೆರಿಗೆ ಕಟ್ಟುವುದಕ್ಕೆ ಸ್ಪಲ್ಪ ಸಮಯ ಬೇಕು ಅಂತ ಮಂತ್ರಿ ಮಾಲ್ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದಕ್ಕೆ ಕಾಲಾವಕಾಶವನ್ನೂ ನೀಡಲಾಗಿತ್ತು. ಇಷ್ಟಾದರೂ ಬುದ್ಧಿ ಕಲಿಯದೇ ತೆರಿಗೆ ಪಾವತಿಸದ ಮಂತ್ರಿಮಾಲ್ ಮೇಲೆ ಇಂದು ಬೆಳಗ್ಗೆ ಪಾಲಿಕೆ ಅಧಿಕಾರಿಗಳು ಮತ್ತೆ ದಾಳಿ ಮಾಡಿ, ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.‘
ಇದನ್ನೂ ಓದಿ: ತೆರಿಗೆ ಕಟ್ಟದೆ ಕಳ್ಳಾಟ ಆಡುತ್ತಿದ್ದ ಮಂತ್ರಿ ಮಾಲ್ಗೆ ಬಿಬಿಎಂಪಿ ಶಾಕ್: ಚರಾಸ್ತಿ ಮುಟ್ಟುಗೋಲು
ಕಚೇರಿಯಲ್ಲಿರುವ ಚೇರ್, ಜೆರಾಕ್ಸ್ ಮೆಶಿನ್, ಕಂಪ್ಯೂಟರ್, ಲ್ಯಾಪ್ಟಾಪ್ ಹಾಗೂ ಮೀಟಿಂಗ್ ಟೇಬಲ್ಸ್ಗಳನ್ನು ವಶಕ್ಕೆ ಪಡೆದಿರುವ ಬಿಬಿಎಂಪಿ ಸಿಬ್ಬಂದಿ ಲೆಕ್ಕ ಮಾಡುತ್ತಿದ್ದಾರೆ. ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಯೋಗೇಶ್ ನೇತೃತ್ವದಲ್ಲಿ ಸುಮಾರು 50 ಮಾರ್ಷಲ್ಗಳು, ಆರ್ಒ, ಎಆರ್ಒ ಹಾಗೂ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆದಿದೆ.
ಆದರೆ ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಇದೀಗ ಬಿಬಿಎಂಪಿ ಅಧಿಕಾರಿಗಳು ವಶಕ್ಕೆ ಪಡೆದಿರುವ ವಸ್ತುಗಳನ್ನು ಹಿಂತಿರುಗಿಸುತ್ತಿದೆ. ಮಂತ್ರಿಮಾಲ್ನ ಕಳ್ಳಾಟಕ್ಜೆ ಬಿಬಿಎಂಪಿ ಮಣಿದಿದ್ದು ಇಷ್ಟು ಹೊತ್ತು ಸೀಜ್ ಮಾಡಿದ ವಸ್ತುಗಳನ್ನ ಮತ್ತೆ ವಾಪಸ್ ಮಾಡುತ್ತಿದ್ದಾರೆ.
ಕಳೆದ ಆರು ವರ್ಷದಿಂದ 42 ಕೋಟಿ ತೆರಿಗೆ ಬಾಕಿ ಅಂತ ನೋಟೀಸ್ ಕಳಿಸಿದ್ದರೂ ಮಂತ್ರಿಮಾಲ್ ಕಡೆಯಿಂದ ಉತ್ತರ ಇರಲಿಲ್ಲ. ಈಗ ತೆರಿಗೆಯೂ ಸಿಕ್ಕಿಲ್ಲ, ವಸೂಲಿ ಮಾಡಿದ ವಸ್ತುಗಳೂ ಇಲ್ಲ ಎಂಬಂತಾಗಿದೆ.
ಆಗಿದ್ದೇನು?
ಮಂತ್ರಿಮಾಲ್ ಚರಾಸ್ತಿ ಗಳನ್ನ ವಶಕ್ಕೆ ಪಡೆಯಲು ಕೋರ್ಟ್ನಿಂದ ಈ ಹಿಂದೆಯೇ ಸ್ಟೇ ತರಲಾಗಿದೆ. ಮಂತ್ರಿಮಾಲ್, ಸಿಟಿ ಸಿವಿಲ್ ಕೋರ್ಟ್ನಿಂದ ಸ್ಟೇ ತಂದಿದ್ದು ಈ ಕಾರಣದಿಂದಾಗಿ ವಶಕ್ಕೆ ಪಡೆದ ಚರಾಸ್ತಿಗಳನ್ನ ಮತ್ತೆ ಮಂತ್ರಿಮಾಲ್ ಒಳಗಡೆನೆ ಬಿಬಿಎಂಪಿ ಸಿಬ್ಬಂದಿ ಇಡುತ್ತಿದ್ದಾರೆ.
ಮಂತ್ರಿಮಾಲ್ ಕಡೆಯಿಂದ ಫ್ರೆಬ್ರವರಿ ೦೨ಕ್ಕೆ ಸ್ಟೇ ತರಲಾಗಿದೆ. ಮಂತ್ರಿಮಾಲ್ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿಗಳು ದಾಳಿ ಮಾಡುವ ವೇಳೆ ಸ್ಟೇ ಕಾಪಿಯನ್ನು ತೋರಿಸಿಲ್ಲ. ಈಗ ಮಂತ್ರಿಮಾಲ್ ಕಡೆಯ ವಕೀಲರು ಸ್ಟೇ ತೋರಿಸಿದ ಬಳಿಕ ಬಿಬಿಎಂಪಿ ಸಿಬ್ಬಂದಿ ಚರಾಸ್ತಿಯನ್ನು ವಾಪಾಸ್ ಇಡುತ್ತಿದ್ದಾರೆ.