ರಾಯಚೂರು: ಕೋವಿಡ್ ಸೋಂಕು ಅವರಿವರೆನ್ನದೆ ಎಲ್ಲರನ್ನೂ ಒಂದು ರೀತಿಯಲ್ಲಿ ಬಲಿ ಪಡೆಯುತ್ತಿದ್ದು ಇದೀಗ ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥರ ಆಪ್ತ ಕಾರ್ಯದರ್ಶಿ ಎಸ್.ಎನ್. ಸುಯಮೀಂದ್ರಾಚಾರ್ ಅವರೂ ಕೋವಿಡ್ನಿಂದಾಗಿ ಮೃತಪಟ್ಟಿರುವ ವಿಷಯ ಹೊರಬಿದ್ದಿದೆ. ಕೆಲವು ದಿನಗಳ ಹಿಂದೆ ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಅವರು ಇಂದು ದೆಹಲಿಯ ಆಸ್ಪತ್ರೆಯೊಂದರಲ್ಲಿ ಮೃತಪಟ್ಪಿದ್ದಾರೆ.
ಇವರಲ್ಲಿ ಕೋವಿಡ್-19 ಸೋಂಕು ಇರುವುದು ಕೆಲವು ದಿನಗಳ ಹಿಂದೆ ದೃಢಪಟ್ಟಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಅದಾಗ್ಯೂ ಚಿಕಿತ್ಸೆ ಫಲಕಾರಿಯಾಗದ್ದರಿಂದ ಇಂದು ಸಂಜೆ ಕೊನೆಯುಸಿರೆಳೆದರು. ಪೂರ್ವಾಶ್ರಮದಲ್ಲಿ ಇವರು ಶ್ರೀಮಠದ ಪೂರ್ವ ಪೀಠಾಧಿಪತಿ ಶ್ರೀ ಸುಯತೀಂದ್ರತೀರ್ಥರ ಪುತ್ರರು.
ಇವತ್ತೊಂದೇ ದಿನ 217 ಮಂದಿ ಕೋವಿಡ್ಗೆ ಬಲಿ, ಇಂದು 48 ಸಾವಿರ ಕರೊನಾ ಕೇಸ್; ನಿನ್ನೆಗಿಂತ 13 ಸಾವಿರ ಹೆಚ್ಚಳ!