More

    ಲಾಕ್​ಡೌನ್​ ನಡುವೆಯೂ ಹಾಡಹಗಲಲ್ಲೇ ದಂಪತಿಯ ಬರ್ಬರ ಹತ್ಯೆ

    ಮಂಗಳೂರು: ಹಾಡಹಗಲಲ್ಲೇ ದಂಪತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಮಂಗಳೂರಿನ ಹೊರವಲಯದ ಕಿನ್ನಿಗೋಳಿ ಏಳಿಂಜೆಯಲ್ಲಿ ನಡೆದಿದೆ.

    ವಿನ್ಸೆಂಟ್ ಡಿಸೋಜ(48), ಪತ್ನಿ ಹೆಲಿನ್ ಡಿಸೋಜ(43) ಹತ್ಯೆಗೊಳಗಾದವರು. ವಿನ್ಸೆಂಟ್ ಸ್ವಯಂ ನಿವೃತ್ತ ಯೋಧರಾಗಿದ್ದರು. ವಿದೇಶಿ ಹಡಗಿನಲ್ಲಿ ಕೆಲಸ ಮಾಡುತ್ತಿದ್ದರು. ನೆರೆ ಮನೆಯ ಅಲ್ಪನ್ಸ್ ಸಲ್ಡಾನ(51) ಕೊಲೆ ಮಾಡಿದ ಆರೋಪಿಯಾಗಿದ್ದು, ಪಿಕಾಸಿ ಹಾಗೂ ಹಾರೆಯಿಂದ ಮನೆ ಮುಂಭಾಗದಲ್ಲೇ ಬರ್ಬರವಾಗಿ ಹತ್ಯೆಗೈಯಲಾಗಿದೆ.

    ಮನೆ ಪಕ್ಕದ ಜಾಗಕ್ಕಾಗಿ ನಡೆದ ತಕರಾರು ಹಿನ್ನಲೆಯಲ್ಲಿ‌ ಕೊಲೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕೇ ಬೇಡವೇ- ಸಚಿವ ಸುರೇಶ್​ಕುಮಾರ್ ಪ್ರತಿಪಾದಿಸುವುದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts