More

    ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಸಿಗರೇಟ್​ ಸೇದಿದ ಭೂಪ! ಮುಂದೇನಾಯ್ತು?

    ಬೆಂಗಳೂರು: ಈ ಭೂಪನಿಗೆ ಅದೇನು ತಳಮಳವೋ ಗೊತ್ತಿಲ್ಲ. ಅಸ್ಸಾಮಿನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರಲು ಎಷ್ಟು ಹೊತ್ತು ಬೇಕು? ಕೆಲವೇ ಗಂಟೆಗಳಲ್ಲಿ ಬಂದು ಬಿಡಬಹುದು. ಈತನಿಗೆ ಮಾತ್ರ ತನ್ನನ್ನು ತಡೆದುಕೊಳ್ಳಲು ಆಗಲಿಲ್ಲ ಎಂದು ಕಾಣುತ್ತದೆ. ಹಾರುತ್ತಿದ್ದ ವಿಮಾನದಲ್ಲೇ ಈತ ಸಿಗರೇಟ್​ ಸೇದಿ ಇದ್ದ ಎಲ್ಲಾ ಪ್ರಯಾಣಿಕರಿಗೂ ಒಮ್ಮೆಗೆ ಶಾಕ್​ ನೀಡಿದ್ದಾನೆ.

    ಮಧ್ಯರಾತ್ರಿ 01:30 6E 716 ಇಂಡಿಗೂ ವಿಮಾನದಲ್ಲಿ ಈ ಘಟನೆ ನಡೆದಿದೆ. ಈತನನ್ನು ಅಸ್ಸಾಂ ಮೂಲದ ಶೇಹರಿ ಚೌಧರಿ ಎಂದು ಗುರುತಿಸಲಾಗಿದೆ. ಈತ ಒಮ್ಮೆಲೆ ತನ್ನ ಆಸನದಿಂದ ಎದ್ದು ಶೌಚಾಲಯಕ್ಕೆ ಹೋಗಿದ್ದಾನೆ. ಅಲ್ಲಿ ಸಿಗರೇಟ್​ಗೆ ಬೆಂಕಿ ಹಚ್ಚಿ ಸೇದಿದ್ದಾನೆ. ಇದರಿಂದಾಗಿ ಶೌಚಾಲಯದಿಂದ ಹೊಗೆ ಮತ್ತು ವಾಸನೆ ಬಂದಿದ್ದು ಪ್ರಯಾಣಿಕರು ಒಮ್ಮೆಗೆ ಗಾಬರಿಗೆ ಒಳಗಾಗಿದ್ದಾರೆ. ಹೀಗಾಗಿ ವೈಮಾನಿಕ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಪ್ರಯಾಣಿಕ ಸಿಗರೇಟ್ ಸೇದಿರುವುದು ಬೆಳಕಿಗೆ ಬಂದಿದೆ.

    ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಸಿಗರೇಟ್​ ಸೇದಿದ ಭೂಪ! ಮುಂದೇನಾಯ್ತು?

    ಹೀಗಾಗಿ ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಕೂಡಲೆ ಏರ್​ಲೈನ್ಸ್​ ಸಿಬ್ಬಂದಿ ಪ್ರಯಾಣಿಕನನ್ನು ಭದ್ರತಾ ಪಡೆಯ ವಶಕ್ಕೆ ಒಪ್ಪಿಸಿದ್ದಾರೆ. ವಿಮಾನದಲ್ಲಿ ಸ್ಮೋಕಿಂಗ್ ಮಾಡಿದ್ದಕ್ಕೆ ಏರ್ಪೋಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ಜತೆಗೆ ತನಿಖೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts