More

    VIDEO| ಪ್ರಾಣ ಪಣಕ್ಕಿಟ್ಟು ದೈತ್ಯ ಕಾಳಿಂಗ ಸರ್ಪ ರಕ್ಷಣೆ: ಎದೆ ಝಲ್​ ಎನಿಸುವ ವಿಡಿಯೋ ಇದು…

    ಮುಂಬೈ: ಮಹಾರಾಷ್ಟ್ರದ ಅಹ್ಮದ್​ನಗರದ ಪ್ರಖ್ಯಾತ ಉರಗ ರಕ್ಷಕ ಸರ್ಪಮಿತ್ರ ಆಕಾಶ್ ಜಾಧವ್ ಅವರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಸುಮಾರು 13 ಅಡಿಗೂ ಹೆಚ್ಚು ಉದ್ದದ ಕಾಳಿಂಗ ಸರ್ಪವನ್ನು ಒಡಿಶಾದಲ್ಲಿ ರಕ್ಷಣೆ ಮಾಡಿದ್ದಾರೆ.

    ಸರ್ಪಮಿತ್ರ ಆಕಾಶ್​ ಜಾಧವ್​ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಶೇರ್​ ಮಾಡಲಾಗಿದೆ. ಕಾಳಿಂಗ ಸರ್ಪ ಇರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ಒಡಿಶಾದ ನಯಾಗಢ ಜಿಲ್ಲೆಯ ಒಡಂಗಾವ್​ ತಾಲೂಕಿನ ಕುಸಪಂದೇರಿ ಗ್ರಾಮಕ್ಕೆ ಆಕಾಶ್​ ತಮ್ಮ ತಂಡದೊಂದಿಗೆ ತೆರಳಿ ಗ್ರಾಮದ ಹೊಲವೊಂದರಲ್ಲಿ ಅವಿತು ಕುಳಿತಿದ್ದ ಸರ್ಪವನ್ನು ರಕ್ಷಣೆ ಮಾಡಿದ್ದಾರೆ.

    ಸುಮಾರು 18 ನಿಮಿಷದ ವಿಡಿಯೋದಲ್ಲಿ ಕಾಳಿಂಗ ಸರ್ಪವು ಆಕಾಶ್​ ಅವರನ್ನು ಕಚ್ಚಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದು, ತಮ್ಮ ಕೌಶಲ್ಯ ಮತ್ತು ಅನುಭವದಿಂದ ಆಕಾಶ್​ ಎಸ್ಕೇಪ್​ ಆಗುವ ರೋಚಕ ದೃಶ್ಯವನ್ನು ನೋಡಬಹುದಾಗಿದೆ.

    ಹಾವನ್ನು ಹಿಡಿದ ಬಳಿಕ ಸ್ಥಳೀಯರಿಗೆ ಕಾಣುವಂತೆ ಹಾವನ್ನು ಬಿಟ್ಟು ಅದನ್ನು ಆಡಿಸುವಾಗ, ಹಾವು ಕೂಡ ಸ್ಥಳದಿಂದ ಪರಾರಿಯಾಗಲು ಯತ್ನಿಸಿದೆ. ಆದರೆ, ಸರ್ಪವನ್ನು ಹಿಡಿದು ಜನರಿಗೆ ಹಾವಿನ ಬಗ್ಗೆ ಮತ್ತು ಅದರ ವಿಷದ ಶಕ್ತಿಯ ಬಗ್ಗೆ ಆಕಾಶ್​ ಅವರು ಅರಿವು ಮೂಡಿಸಿದರು.

    ಯಾವುದೇ ಕಾರಣಕ್ಕೂ ಹಾವುಗಳನ್ನು ಕೊಲ್ಲದಂತೆ ಜನರ ಬಳಿ ಆಕಾಶ್​ ಮನವಿ ಮಾಡಿಕೊಂಡರು. ಕೊಲ್ಲುವ ಬದಲಾಗಿ ನಮಗೆ ಮಾಹಿತಿ ನೀಡಿ, ನಾವು ಬಂದು ರಕ್ಷಣೆ ಮಾಡುತ್ತೇವೆ ಎಂದು ಹೇಳಿದರು. ಇದಾದ ಬಳಿಕ ರಕ್ಷಣೆ ಮಾಡಿದ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು. (ಏಜೆನ್ಸೀಸ್​)

    ಏನಿದು ಡ್ರೋನ್​ ಪ್ರತಾಪನ ಹೊಸ ಅವತಾರ? ನೆಟ್ಟಿಗರ ಬಗೆಬಗೆಯ ಕಾಮೆಂಟ್​ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!

    ನೀವು ಉತ್ತೇಜಿಸುತ್ತಿರುವ ನಾರಿ ಶಕ್ತಿ ಇದೆನಾ? ಪತ್ನಿಯಿಂದ ಹಲ್ಲೆಗೊಳಗಾಗಿ ಪ್ರಧಾನಿ ಕಚೇರಿಗೆ ದೂರಿತ್ತ ಪತಿ

    ಮೆಟ್ರೋದಲ್ಲಿ 1,669 ಕ್ಯೂಆರ್ ಕೋಡ್ ಟಿಕೆಟ್ ಬಳಕೆ: ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts