ಮುಂಬೈ: ಮಹಾರಾಷ್ಟ್ರದ ಅಹ್ಮದ್ನಗರದ ಪ್ರಖ್ಯಾತ ಉರಗ ರಕ್ಷಕ ಸರ್ಪಮಿತ್ರ ಆಕಾಶ್ ಜಾಧವ್ ಅವರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಸುಮಾರು 13 ಅಡಿಗೂ ಹೆಚ್ಚು ಉದ್ದದ ಕಾಳಿಂಗ ಸರ್ಪವನ್ನು ಒಡಿಶಾದಲ್ಲಿ ರಕ್ಷಣೆ ಮಾಡಿದ್ದಾರೆ.
ಸರ್ಪಮಿತ್ರ ಆಕಾಶ್ ಜಾಧವ್ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಶೇರ್ ಮಾಡಲಾಗಿದೆ. ಕಾಳಿಂಗ ಸರ್ಪ ಇರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ಒಡಿಶಾದ ನಯಾಗಢ ಜಿಲ್ಲೆಯ ಒಡಂಗಾವ್ ತಾಲೂಕಿನ ಕುಸಪಂದೇರಿ ಗ್ರಾಮಕ್ಕೆ ಆಕಾಶ್ ತಮ್ಮ ತಂಡದೊಂದಿಗೆ ತೆರಳಿ ಗ್ರಾಮದ ಹೊಲವೊಂದರಲ್ಲಿ ಅವಿತು ಕುಳಿತಿದ್ದ ಸರ್ಪವನ್ನು ರಕ್ಷಣೆ ಮಾಡಿದ್ದಾರೆ.
ಸುಮಾರು 18 ನಿಮಿಷದ ವಿಡಿಯೋದಲ್ಲಿ ಕಾಳಿಂಗ ಸರ್ಪವು ಆಕಾಶ್ ಅವರನ್ನು ಕಚ್ಚಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದು, ತಮ್ಮ ಕೌಶಲ್ಯ ಮತ್ತು ಅನುಭವದಿಂದ ಆಕಾಶ್ ಎಸ್ಕೇಪ್ ಆಗುವ ರೋಚಕ ದೃಶ್ಯವನ್ನು ನೋಡಬಹುದಾಗಿದೆ.
ಹಾವನ್ನು ಹಿಡಿದ ಬಳಿಕ ಸ್ಥಳೀಯರಿಗೆ ಕಾಣುವಂತೆ ಹಾವನ್ನು ಬಿಟ್ಟು ಅದನ್ನು ಆಡಿಸುವಾಗ, ಹಾವು ಕೂಡ ಸ್ಥಳದಿಂದ ಪರಾರಿಯಾಗಲು ಯತ್ನಿಸಿದೆ. ಆದರೆ, ಸರ್ಪವನ್ನು ಹಿಡಿದು ಜನರಿಗೆ ಹಾವಿನ ಬಗ್ಗೆ ಮತ್ತು ಅದರ ವಿಷದ ಶಕ್ತಿಯ ಬಗ್ಗೆ ಆಕಾಶ್ ಅವರು ಅರಿವು ಮೂಡಿಸಿದರು.
ಯಾವುದೇ ಕಾರಣಕ್ಕೂ ಹಾವುಗಳನ್ನು ಕೊಲ್ಲದಂತೆ ಜನರ ಬಳಿ ಆಕಾಶ್ ಮನವಿ ಮಾಡಿಕೊಂಡರು. ಕೊಲ್ಲುವ ಬದಲಾಗಿ ನಮಗೆ ಮಾಹಿತಿ ನೀಡಿ, ನಾವು ಬಂದು ರಕ್ಷಣೆ ಮಾಡುತ್ತೇವೆ ಎಂದು ಹೇಳಿದರು. ಇದಾದ ಬಳಿಕ ರಕ್ಷಣೆ ಮಾಡಿದ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು. (ಏಜೆನ್ಸೀಸ್)
ಏನಿದು ಡ್ರೋನ್ ಪ್ರತಾಪನ ಹೊಸ ಅವತಾರ? ನೆಟ್ಟಿಗರ ಬಗೆಬಗೆಯ ಕಾಮೆಂಟ್ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!
ನೀವು ಉತ್ತೇಜಿಸುತ್ತಿರುವ ನಾರಿ ಶಕ್ತಿ ಇದೆನಾ? ಪತ್ನಿಯಿಂದ ಹಲ್ಲೆಗೊಳಗಾಗಿ ಪ್ರಧಾನಿ ಕಚೇರಿಗೆ ದೂರಿತ್ತ ಪತಿ
ಮೆಟ್ರೋದಲ್ಲಿ 1,669 ಕ್ಯೂಆರ್ ಕೋಡ್ ಟಿಕೆಟ್ ಬಳಕೆ: ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ