ಬೆಂಗಳೂರು: ನಿನ್ನನ್ನು ಪ್ರೀತಿಸುತ್ತೇನೆ, ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿ ಯುವಕನೊಬ್ಬ ಯುವತಿಗೆ ಮೋಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಚಂದ್ರ ಲೇಔಟ್ ನಿವಾಸಿ ರವಿಚಂದ್ರ ಎಂಬಾತ ಕಳೆದ ಆರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಶಾಲಾ ದಿನಗಳಿಂದ ಸ್ನೇಹಿತೆಯಾಗಿದ್ದ ಆಕೆಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡಿದ್ದ ಆತ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ಕೊಟ್ಟಿದ್ದ. ಅದೇ ನಂಬಿಕೆಯ ಮೇಲೆ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನು ಹೊಂದಿದ್ದ.
ಇದೀಗ ರವಿಚಂದ್ರ ಪ್ರೇಯಸಿಗೆ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. 30 ವರ್ಷದ ತನ್ನ ಪ್ರೇಯಸಿಗೆ ತಾವಿಬ್ಬರೂ ಜತೆಗಿರುವ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಫೆ.20ರಂದು ಯುವತಿಯ ಮನೆಗೂ ಸಹ ತೆರಳಿದ್ದು ಅಲ್ಲಿ ಯುವತಿಯ ಮನೆಯವರಿಗೆ ಜೀವ ಬೆದರಿಕೆ ಹಾಕಿ ಬಂದಿದ್ದಾನೆ. ಆರೋಪಿಯ ಅಕ್ಕ ಲತಾ, ಬಾವ ದೇವರಾಜ್ ಮತ್ತು ಕೆಲವರಿಂದ ಯುವತಿಯ ಮನೆಯವರಿಗೆ ಜೀವ ಬೆದರಿಕೆಯನ್ನು ಹಾಕಲಾಗಿದೆ.
ಪ್ರಿಯತಮನ ವರ್ತನೆಯಿಂದ ಬೇಸತ್ತಿರುವ ಸಂತ್ರಸ್ಥೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಚಂದ್ರ ಲೇಔಟ್ನ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮಾರ್ಚ್ 31ರವರೆಗೂ ಕರ್ನಾಟಕ ಬಂದ್! ತುರ್ತು ಸಚಿವ ಸಂಪುಟ ಸಭೆಯಲ್ಲಿ ಬಂದ್ ವಿಸ್ತರಣೆಯ ಮಹತ್ವದ ನಿರ್ಧಾರ