ನವದೆಹಲಿ: ಜೀವಂತ ಮೂರು ಗುಂಡುಗಳನ್ನು ಜೇಬಿನಲ್ಲಿಟ್ಟುಕೊಂಡು ಸಂಸತ್ತಿನ ಆವರಣದೊಳಗೆ ಅನಧಿಕೃತವಾಗಿ ಪ್ರವೇಶಿಸಲು ಯತ್ನಿಸಿದ 44 ವರ್ಷದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
ಪಾರ್ಲಿಮೆಂಟಿನ ಗೇಟ್ ನಂ. 8ರಿಂದ ಹಾಗೆ ನುಸುಳಲು ಯತ್ನಿಸಿದವನನ್ನು ಅಖ್ತರ್ ಖಾನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ಜೇಬಿನಲ್ಲಿ 0.32 ಬೋರ್ ಮಾದರಿಯ ಮೂರು ಜೀವಂತ ಗುಂಡುಗಳನ್ನು ಇಟ್ಟುಕೊಂಡಿರುವುದು ತಪಾಸಣೆಯಲ್ಲಿ ಪತ್ತೆಯಾಗಿದೆ. ಆತನನ್ನು ಈ ಬಗ್ಗೆ ವಿಚಾರಿಸಿದಾಗ ತಾನೂ ಪಾರ್ಲಿಮೆಂಟ್ಗೆ ಬರುವಾಗ ಅವುಗಳನ್ನು ತೆಗೆದಿರಿಸಲು ಮರೆತು ಬಿಟ್ಟೆ ಎಂದಿದ್ದಾನೆ.
ಪೊಲೀಸ್ ವಶದಲ್ಲಿರುವ ಅಖ್ತರ್ ಖಾನ್, ಶಬೀರ್ ಖಾನ್ ಎಂಬುವವರ ಪುತ್ರ. ಈತ ಉತ್ತರ ಪ್ರದೇಶದ ಗಜಿಯಾಬಾದ್ ಜಿಲ್ಲೆಯ ಗಡಿ ಭಾಗದ ನಿವಾಸಿ.
ಹೆಚ್ಚಿನ ವಿಚಾರಣೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಸಂಸತ್ತಿನಲ್ಲಿ ಪ್ರವೇಶಿಸಲು ಅಕ್ತರ್ಖಾನ್ ಸಂದರ್ಶಕರ ಅಧಿಕೃತ ಪಾಸ್ ಹೊಂದಿದ್ದ.
ಪೊಲೀಸರು ಆಥವಾ ದಾಖಲಾತಿಗಳನ್ನು ಪರಿಶೀಲಿಸಿದರು. ಎಲ್ಲ ಸರಿಯಾಗಿದ್ದು, ಆತ ಅಧಿಕೃತವಾಗಿ ಶಸ್ತ್ರ ಇಟ್ಟುಕೊಳ್ಳಲು ಲೈಸೆನ್ಸ್ ಪಡೆದಿದ್ದಾನೆ. ಅಲ್ಲದೆ ಜೇಬಿನಲ್ಲಿರುವ ಬುಲೆಟ್ಗಳನ್ನು ಮರೆತು ತಂದಿದ್ದೇನೆ ಎಂದಿದ್ದಾನೆ. ಹಾಗಾಗಿ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)