More

    ಸ್ಕೂಟರ್​ಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಟ್ರಕ್​: ಮಾರುಕಟ್ಟೆಗೆ ಹೋಗ್ತಿದ್ದ ತಾತ-ಮೊಮ್ಮಗ ದುರ್ಮರಣ

    ಲಖನೌ: ಸ್ಕೂಟರ್​ಗೆ ಡಿಕ್ಕಿ ಹೊಡೆದ ಟ್ರಕ್​ ಒಂದು ಸುಮಾರು 1 ಕಿ.ಮೀ ದೂರ ಎಳೆದೊಯ್ದ ಪರಿಣಾಮ ತಾತ ಮತ್ತು ಮೊಮ್ಮಗ ದುರಂತ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಕಾನ್ಪುರ್​-ಸಾಗರ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.

    ತಾತ ಸ್ಥಳದಲ್ಲೇ ಸತ್ತರೆ, 6 ವರ್ಷದ ಮೊಮ್ಮಗನನ್ನು ಸ್ಕೂಟರ್​ ಸಮೇತ ಸುಮಾರು 1 ಕಿ.ಮೀ ದೂರ ಟ್ರಕ್​ ಎಳೆದೊಯ್ದಿದೆ. ದಾರಿಹೋಕರು ಸಾಕಷ್ಟು ಮನವಿ ಮಾಡಿದರೂ ವಾಹನ ನಿಲ್ಲಿಸದ ಟ್ರಕ್​ ಚಾಲಕ ಉದ್ಧಟತನ ಪ್ರದರ್ಶಿಸಿದ್ದಾನೆ. ಕೋಪಗೊಂಡ ಗ್ರಾಮಸ್ಥರು ಕಲ್ಲು ತೆಗೆದು ಟ್ರಕ್​ನತ್ತ ಬೀಸಿದರೂ ನಿಲ್ಲಿಸಲಿಲ್ಲ. ಕೊನೆಗೂ ಹೇಗೋ ಟ್ರಕ್​ ಅನ್ನು ತೆಡೆದು ನಿಲ್ಲಿಸಲಾಯಿತು.

    ಇದನ್ನೂ ಓದಿ: ಪುರುಷರು-ಮಹಿಳೆಯರು ಇಬ್ಬರಲ್ಲಿ ಯಾರು ಹೆಚ್ಚು ಮೋಸ ಮಾಡ್ತಾರೆ? ಯುವಕ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್​

    ಇದೇ ಸಂದರ್ಭದಲ್ಲಿ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಟ್ರಕ್​ ಅಡಿಯಲ್ಲಿ ಸಿಲುಕಿದ್ದ 6 ವರ್ಷದ ಬಾಲಕನ ಮೃತದೇಹವನ್ನು ವಶಕ್ಕೆ ಪಡೆದರು ಮತ್ತು ಟ್ರಕ್​ ಚಾಲಕನನ್ನು ಬಂಧಿಸಿದರು.

    ಮೃತರನ್ನು ತಾತ ಉದಿತ್​ ನಾರಾಯಣ್​ ಛಾನ್ಸುರಿಯಾ ಮತ್ತು ಅವರ ಮೊಮ್ಮಗ ಸಾತ್ವಿಕ್​ ಎಂದು ಗುರುತಿಸಲಾಗಿದೆ. ತಾತ ಮತ್ತು ಮೊಮ್ಮಗ ಮಾರುಕಟ್ಟೆಗೆ ಹೋಗಿವಾಗ ದುರ್ಘಟನೆ ಸಂಭವಿಸಿದೆ. ಚಾಲಕನನ್ನು ಬಂಧಿಸಲಾಗಿದೆ ಎಂದು ಮೊಹೋಬಾ ಪೊಲೀಸರು ತಿಳಿಸಿದ್ದಾರೆ.

    ಇಬ್ಬರ ಮೃತದೇಹವನ್ನು ಆ್ಯಂಬುಲೆನ್ಸ್​ ಮೂಲಕ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. (ಏಜೆನ್ಸೀಸ್​)

    ಮದುವೆ ಊಟ ಸೇವಿಸಿ 43 ಮಂದಿ ಅಸ್ವಸ್ಥ: ವಾಂತಿ,ಭೇದಿಯಿಂದ ಆಸ್ಪತ್ರೆಗೆ ದಾಖಲು

    ಮನ್ ಕಿ ಬಾತ್ | ಚಾಮರಾಜನಗರ ವ್ಯಕ್ತಿಗೆ ಲಾಲಿಹಾಡು ವಿಭಾಗದಲ್ಲಿ ಮೊದಲ ಪ್ರಶಸ್ತಿ ಘೋಷಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts