More

    ಚಿಕಿತ್ಸೆಗೆ ಆರ್ಥಿಕ ಸಹಕಾರ ನೀಡಿ

    ಮುಳಬಾಗಿಲು: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಆವನಿ ಗ್ರಾಪಂ ವ್ಯಾಪ್ತಿಯ ದೊಡ್ಡಮಾದೇನಹಳ್ಳಿಯ ಎನ್.ಶ್ರೀನಿವಾಸ್, ರತ್ನಮ್ಮ ದಂಪತಿ ಪುತ್ರಿ ಎಸ್.ಗೌತಮಿ (19) ಚಿಕಿತ್ಸೆಗೆ ಹಣದ ಸಮಸ್ಯೆ ಕಾಡುತ್ತಿದ್ದು, ಪಾಲಕರು ನೆರವಿಗೆ ಸಹಾಯ ಕೋರಿದ್ದಾರೆ.

    ಈಗಾಗಲೇ 4 ಲಕ್ಷ ರೂಪಾಯಿಗೂ ಅಧಿಕ ಹಣ ವೆಚ್ಚ ಮಾಡಿದ್ದರೂ ಆರೋಗ್ಯ ಸುಧಾರಿಸಿಲ್ಲ. ಗೌತಮಿ ಎಸ್ಸೆಸ್ಸೆಲ್ಸಿ ನಂತರ ಮುಳಬಾಗಿಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಅಂತಿಮ ವರ್ಷ ಪರೀಕ್ಷೆ ಮುಗಿದ ನಂತರ ಅನಾರೋಗ್ಯಕ್ಕೆ ತುತ್ತಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿದಾಗ ಕಿಡ್ನಿ ವೈಫಲ್ಯವಿರುವುದು ತಿಳಿದುಬಂದಿತ್ತು.

    ಆಸ್ಪತ್ರೆ ವೆಚ್ಚಗಳಿಗೆ ಜೀವನಾಧಾರವಾಗಿದ್ದ 4 ಸೀಮೆ ಹಸು ಮಾರಾಟ ಮಾಡಿದ್ದು, ಈಗ ಮಗಳ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಇವರಿಗೆ ಆರ್ಥಿಕ ಸಹಕಾರ ನೀಡುವವರು ಕಾಶೀಪುರ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಖಾತೆ ಸಂಖ್ಯೆ 10692101043455 ಐಎಫ್‌ಎಸ್‌ಸಿ ಕೋಡ್ :PKGB0010692 ಗೆ ಹಣ ಜಮೆ ಮಾಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts