More

    ಗೋವಿನಜೋಳದ ರಾಶಿ ಭಸ್ಮ

    ಹಾನಗಲ್ಲ: ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ 9 ಎಕರೆ ಪ್ರದೇಶದಲ್ಲಿ ಬೆಳೆದು ಸಂಗ್ರಹಿಸಿಟ್ಟಿದ್ದ ಗೋವಿನಜೋಳದ ರಾಶಿ ಸುಟ್ಟು ಕರಕಲಾದ ಘಟನೆ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

    ಅರಳೇಶ್ವರ ಗ್ರಾಮದ ರೈತ ಸಹೋದರರಾದ ಪ್ರವೀಣ ತಿರುಮಲೆ ಹಾಗೂ ರವಿ ತಿರುಮಲೆ ಅವರಿಗೆ ಸೇರಿದ 9 ಎಕರೆ ಜಮೀನಿನಲ್ಲಿ ಬೆಳೆಯಲಾದ ಗೋವಿನಜೋಳದ ತೆನೆಗಳಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಕಟಾವು ಮಾಡಿದ್ದ ಗೋವಿನಜೋಳದ ತೆನೆಗಳನ್ನು ಜಮೀನಿನಲ್ಲಿಯೇ ಕಣ ಮಾಡಿ ರಾಶಿ ಮಾಡಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿತಾದರೂ, ಅಷ್ಟರೊಳಗೆ ಬಹುತೇಕ ರಾಶಿ ಬೆಂಕಿಗಾಹುತಿಯಾಗಿತ್ತು. ಆಡೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts