ಮುಂಬೈ: ಕೇಂದ್ರದ ವಿಶೇಷ ವಿಶೇಷ ಅನುಮತಿ ಮೇರೆಗೆ ನಾಂದೇಢ್ನ ಸಿಖ್ಖರ ಪವಿತ್ರ ಸ್ಥಳ ತಖ್ತ್ ಶ್ರೀ ಹಜೂರ್ ಸಾಹೀಬ್ನಲ್ಲಿ ಸಿಲುಕಿದ್ದ 3,800 ಸಿಖ್ಖರನ್ನು ಪಂಜಾಬ್ ಸರ್ಕಾರ ಮರಳಿ ರಾಜ್ಯಕ್ಕೆ ಕರೆಯಿಸಿಕೊಂಡ ಬೆನ್ನಲ್ಲೇ, ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಕ್ಕೆ ಕರೆಯಿಸಿಕೊಳ್ಳುವಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ.
ಪ್ರಸ್ತುತ ಮಹಾರಾಷ್ಟ್ರದ ವಿವಿಧೆಡೆ ಸ್ಥಾಪಿಸಲಾಗಿರುವ ನಿರಾಶ್ರಿತ ಕೇಂದ್ರಗಳಲ್ಲಿ 3.5 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರಿದ್ದಾರೆ. ಅದರಲ್ಲೂ ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಹಾಗೂ ಚತ್ತೀಸ್ಗಡ್ದವರು ಹೆಚ್ಚಿದ್ದಾರೆ. ಇವರನ್ನು ತಮ್ಮ ರಾಜ್ಯಗಳಿಗೆ ಕರೆಸಿಕೊಳ್ಳಬೇಕೆಂದು ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಿಎಂ ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ.
ವಲಸೆ ಕಾರ್ಮಿಕರನ್ನು ಆಯಾ ರಾಜ್ಯಗಳ ಗಡಿಗೆ ಕೊಂಡೊಯ್ದು ತಲುಪಿಸುವ ಚಿಂತನೆ ರಾಜ್ಯ ಸರ್ಕಾರದ್ದಾಗಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಅಜಯ್ ಮೆಹ್ತಾ ಹೇಳಿದ್ದಾರೆ.
ಹಿಮಾಚಲಪ್ರದೇಶ ಹಾಗೂ ಹರಿಯಾಣ ಸರ್ಕಾರಗಳು ಕಾಶ್ಮೀರಿ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿವೆ. ಜತೆಗೆ, ಉತ್ತರಪ್ರದೇಶದವರನ್ನು ಕೂಡ ವಿಶೇಷ ಬಸ್ಗಳಲ್ಲಿ ರವಾನಿಸಿವೆ. ಹೀಗಾಗಿ ಮಹಾರಾಷ್ಟ್ರದಲ್ಲಿರುವ ವಲಸೆ ಕಾರ್ಮಿಕರನ್ನು ಕರೆಯಿಸಿಕೊಳ್ಳಲು ಆಯಾ ರಾಜ್ಯಗಳು ಮುಂದಾಗಲಿ ಎಂದು ಮೆಹ್ತಾ ಹೇಳಿದ್ದಾರೆ.
ಈ ವಿಷಯವನ್ನು ಕೇಂದ್ರ ಸಂಪುಟ ಕಾರ್ಯದರ್ಶಿಯೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ವಲಸೆ ಕಾರ್ಮಿಕರನ್ನು ಆಯಾ ರಾಜ್ಯದ ಗಡಿಗೆ ರವಾನಿಸಲಾಗುವುದು. ಅವರು ನಮ್ಮವರನ್ನು ಗಡಿಗೆ ತಂದು ಬಿಡಲಿ ಎಂಬ ಸಲಹೆಯನ್ನು ಮೆಹ್ತಾ ಮುಂದಿಟ್ಟಿದ್ದಾರೆ
ಸದ್ಯ ನಾಂದೇಢ್ನಲ್ಲಿರುವ ಸಿಖ್ಖರನ್ನು ಒಂದು ಬಸ್ನಲ್ಲಿ 35 ಜನರಂತೆ 80 ಬಸ್ಗಳಲ್ಲಿ ಕಳುಹಿಸಲಾಗುತ್ತಿದೆ. ಉಳಿದವರನ್ನು ಕಳುಹಿಸಲು ಇನ್ನೂ 100 ಬಸ್ಗಳು ಬೇಕಾಗುತ್ತವೆ. ಅಲ್ಲದೇ, 3,300 ಕಿ.ಮೀ ಪ್ರಯಾಣಕ್ಕಾಗಿ ಒಂದು ಬಸ್ನಲ್ಲಿ ಮೂವರು ಚಾಲಕರು, ಒಬ್ಬ ಪೊಲೀಸ್ನನ್ನು ನಿಯೋಜಿಸಲಾಗಿದೆ.
ತನ್ನೂರಿಗೆ ತೆರಳಲು ಆತನಿಗೆ ಇದನ್ನು ಬಿಟ್ಟರೆ ಬೇರಾವ ದಾರಿಯೂ ಇರಲಿಲ್ಲ, ಇದಕ್ಕಾಗಿ ವೆಚ್ಚವಾಗಿದ್ದೆಷ್ಟು ಗೊತ್ತೆ?