ಮಹಾಲಿಂಗಪುರ: ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯ ಮುಧೋಳ-ನಿಪ್ಪಾಣಿ ಹೆದ್ದಾರಿಯ ರನ್ನ ಬೆಳಗಲಿಯ ಚಿಕ್ಕಹಳ್ಳದ ಬಳಿ ನಡೆದ ರಸ್ತೆ ಅಪಘಾತದಲ್ಲಿ ತಾಯಿ-ಮಗ ಧಾರುಣವಾಗಿ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಮದುವೆಯಾಗಿ 3 ವರ್ಷವಾದರೂ ಹೆಂಡತಿ ಗರ್ಭವತಿ ಆಗಲಿಲ್ಲವೆಂದೇ ಬೇಸರಗೊಂಡ ಗಂಡ ಹೀಗಾ ಮಾಡೋದು?!
ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಕಲ್ಲಪ್ಪ ಶ್ರೀಶೈಲ ಚಿನಗುಂಡಿ (23) ಹಾಗೂ ದುಂಡವ್ವ ಶ್ರೀಶೈಲ ಚಿನಗುಂಡಿ (45) ಮೃತರು. ಭಾನುವಾರ ರನ್ನಬೆಳಗಲಿಯಿಂದ ಹಂದಿಗುಂದಕ್ಕೆ ಬೈಕ್ ಮೇಲೆ ತೆರಳುವಾಗ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದು ಬೈಕ್ ಚಲಾಯಿಸುತ್ತಿದ್ದ ಕಲ್ಮೇಶ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಬೈಕ್ ಹಿಂದೆ ಕುಳಿತಿದ್ದ ತಾಯಿ ದುಂಡವ್ವ ತೀವ್ರ ಗಾಯಗೊಂಡು ಮುಧೋಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಕುಡಿದ ಅಮಲಿನಲ್ಲಿದ್ದ ಲಾರಿ ಚಾಲಕ ಮುಂದೆ ಚಲಿಸುತ್ತಿದ್ದ ಕಬ್ಬು ತುಂಬಿದ ಟ್ರಾೃಕ್ಟರನ್ನು ಹಿಂದಿಕ್ಕುವ ಭರಾಟೆಯಲ್ಲಿ ಬೈಕ್ಗೆ ರಭಸವಾಗಿ ಡಿಕ್ಕಿ ಹೊಡೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೇಡ ಎನ್ನುವ ಮೂಲಕ ಸಮೋಸಾಗೆ ಬೇಜಾರು ಮಾಡ್ಬೇಡಿ: ವೈರಲ್ ಆಯ್ತು ಚೆನ್ನೈ ರೆಸ್ಟೋರೆಂಟ್ ರಶೀದಿ!
ಆರು ತಿಂಗಳ ಹಿಂದೆ ಮದುವೆ
ಕೃಷಿ ಕುಟುಂಬದ ಜವಾಬ್ದಾರಿಯುತ ಮಗನಾಗಿದ್ದ ಕಲ್ಮೇಶ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದನು. ಆತನ ಪತ್ನಿ ಚೊಚ್ಚಲ ಗರ್ಭಿಣಿಯಾಗಿದ್ದು, ಸೋಮವಾರ ಆಕೆಗೆ ಸೀಮಂತ ಕಾರ್ಯ ನೆರವೇರಿಸಲು ನಿಶ್ಚಯಿಸಲಾಗಿತ್ತು. ಹಿಂದಿನ ದಿನವೇ ಅದರ ಸಿದ್ಧತೆಗಾಗಿ ಬಟ್ಟೆ, ಆಭರಣ ಖರೀದಿಸಿದ್ದರು. ಭಾನುವಾರ ರನ್ನಬೆಳಗಲಿಯ ಬಂದಲಕ್ಷ್ಮಿದೇವಿಗೆ ಉಡಿ ತುಂಬಲು ತಾಯಿ-ಮಗ ಬೈಕ್ ಮೇಲೆ ತೆರಳಿದ್ದರು. ದೇವಿ ದರ್ಶನ ಪಡೆದು ವಾಪಸ್ ಊರಿಗೆ ಹೋಗುವಾಗ ದಾರಿ ಮಧ್ಯೆ ಅಪಘಾತ ಸಂಭವಿಸಿದೆ. ಮಂಗಳ ಕಾರ್ಯ ನಡೆಯಬೇಕಿದ್ದ ಮನೆ ಸೂತಕದ ಮನೆಯಾಗಿ ಇಡೀ ಕುಟುಂಬ ದಿಗ್ಭ್ರಾಂತವಾಗಿದೆ.