ಬೆಂಗಳೂರು: ಕರ್ನಾಟಕದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಜೀವನವನ್ನಾಧರಿಸಿ ನಿರ್ವಣವಾಗುತ್ತಿರುವ ‘ಮಹಾಕವಿ’ ಚಿತ್ರದ ಸ್ಕ್ರಿಪ್ಟ್ಪೂಜೆಯು ಅವರ ಹುಟ್ಟುಹಬ್ಬವಾದ ಮಂಗಳವಾರದಂದೇ ಮಂಜೇಶ್ವರದ ಅವರ ಮನೆಯಲ್ಲಿ ನೆರವೇರಿದೆ. ಈ ಸಮಾರಂಭದಲ್ಲಿ ಮಂಗಳೂರಿನ ಪೊಲೀಸ್ ಕಮಿಷನರ್ ಶಶಿಕುಮಾರ್, ಎಡೆನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಮಂಜೇಶ್ವರದ ವಿನ್ಸೆಂಟ್ ಚರ್ಚ್ನ ವಿನೋದ್ ಸಲ್ಡಾನಾ, ವಿಕ್ರಂ ಸೂರಿ, ನಮಿತಾ ರಾವ್ ಮುಂತಾದವರು ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಈ ಚಿತ್ರವನ್ನು ಗಡಿನಾಡು ಮಂಜೇಶ್ವರದವರೇ ಆದ ನಟ ರಘು ಭಟ್ ಮತ್ತು ಅವರ ಪತ್ನಿ ಸುಗುಣ ಭಟ್ ತಮ್ಮ ಲಕ್ಷ್ಮೀ ಗಣೇಶ್ ಪ್ರೊಡಕ್ಷನ್ಸ್ನಡಿ ನಿರ್ವಿುಸುತ್ತಿದ್ದಾರೆ. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ. ಗೋವಿಂದ ಪೈಗಳ ಪಾತ್ರವನ್ನು ಜನಪ್ರಿಯ ನಟರೊಬ್ಬರು ನಿರ್ವಹಿಸುತ್ತಿದ್ದು, ಮಂಜೇಶ್ವರ ಸುತ್ತಮುತ್ತ ಮಳೆಗಾಲದಲ್ಲಿ ಚಿತ್ರೀಕರಣ ನಡೆಯಲಿದೆ.
ನಾಲ್ಕೂವರೆ ತಿಂಗಳಲ್ಲಿ ಇಂದು ಅತ್ಯಧಿಕ ಸೋಂಕು!; ಮಂಗಳವಾರವೊಂದೇ ದಿನ ರಾಜ್ಯದಲ್ಲಿ 2,010 ಕರೊನಾ ಪ್ರಕರಣಗಳು
ಸಿನಿಮಾ ನಿರ್ಮಾಪಕ ಶಂಕರೇಗೌಡ ಬಂಧನ; ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಪ್ರೊಡ್ಯೂಸರ್