More

    ಕೆಟ್ಟು ನಿಂತ ಲಾರಿ ರಿಪೇರಿಗಿಳಿದಿದ್ದ ಚಾಲಕನ ನಸೀಬೇ ಕೆಟ್ಟಿತ್ತು!; ಇನ್ನೊಂದು ಲಾರಿ ಡಿಕ್ಕಿ, ಡ್ರೈವರ್​ ಸ್ಥಳದಲ್ಲೇ ಸಾವು..

    ವಿಜಯಪುರ: ಲಾರಿ ಮಾತ್ರ ಕೆಟ್ಟಿರಲಿಲ್ಲ, ಬಹುಶಃ ಲಾರಿ ಚಾಲಕನ ಗ್ರಹಚಾರ ಕೂಡ ಕೆಟ್ಟಿರಬೇಕು. ಏಕೆಂದರೆ ಕೆಟ್ಟು ನಿಂತಿದ್ದ ಲಾರಿಯನ್ನು ರಿಪೇರಿ ಮಾಡುತ್ತಿದ್ದ ಚಾಲಕ ನಿಂತ ಜಾಗದಲ್ಲೇ ಮರಳಿ ಬಾರದ ಲೋಕಕ್ಕೆ ಹೋಗುವಂತಾಗಿದೆ.

    ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ. ಈ ಪ್ರಕರಣದಲ್ಲಿ ಧ್ಯಾನ್​ಸಿಂಗ್ (45) ಎಂಬ ಲಾರಿ ಚಾಲಕ ಮೃತಪಟ್ಟಿದ್ದಾನೆ.

    ಮಧ್ಯಪ್ರದೇಶ ಮೂಲದ ಈತ ಚಲಾಯಿಸುತ್ತಿದ್ದ ಲಾರಿ ಕೆಟ್ಟಹೋಗಿತ್ತು. ಏನಾಗಿದೆ ನೋಡೋಣ ಎಂದು ರಿಪೇರಿಗೆ ಮುಂದಾಗಿದ್ದ ಈತನಿಗೆ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಲಾರಿಯ ಚಾಲಕನಿಗೂ ಗಾಯಗಳಾಗಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನಗೂಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

    ಕೆಟ್ಟು ನಿಂತ ಲಾರಿ ರಿಪೇರಿಗಿಳಿದಿದ್ದ ಚಾಲಕನ ನಸೀಬೇ ಕೆಟ್ಟಿತ್ತು!; ಇನ್ನೊಂದು ಲಾರಿ ಡಿಕ್ಕಿ, ಡ್ರೈವರ್​ ಸ್ಥಳದಲ್ಲೇ ಸಾವು..
    ನಿಂತಿದ್ದ ಹಾಗೂ ಡಿಕ್ಕಿ ಹೊಡೆದ ಲಾರಿ.

    ಒಂದೂವರೆ ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ; ಕಾರಣ ಇದೇನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts