More

    ಲೋಕಸಭೆ 2ನೇ ಹಂತದ ಚುನಾವಣೆ; 45 ಅಭ್ಯರ್ಥಿಗಳು ನಾಮಪತ್ರ ವಾಪಸ್

    ಬೆಂಗಳೂರು: ಧಾರವಾಡದಲ್ಲಿ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ 2ನೇ ಹಂತದ ಲೋಕಸಭೆಯ14 ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 45 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ.

    ಒಟ್ಟು 248 ಪುರುಷ, 24 ಮಹಿಳೆಯರು ಸೇರಿದಂತೆ ಒಟ್ಟು 272 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 45 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದು, 206 ಪುರುಷ, 21 ಮಹಿಳೆಯರು ಒಳಗೊಂಡಂತೆ 227 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿದ್ದಾರೆ.

    ಚಿಕ್ಕೋಡಿ 18, ಬೆಳಗಾವಿ 13, ಬಾಗಲಕೋಟೆ 22, ವಿಜಯಪುರ 8, ಕಲಬುರಗಿ 14, ರಾಯಚೂರು 8, ಬೀದರ್ 18, ಕೊಪ್ಪಳ 19, ಬಳ್ಳಾರಿ 10, ಹಾವೇರಿ 14, ಧಾರವಾಡ 17, ಉತ್ತರ ಕನ್ನಡ 13, ದಾವಣಗೆರೆ 30, ಶಿವಮೊಗ್ಗದಲ್ಲಿ 23 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ.

    ದಾವಣಗೆರೆಯಲ್ಲಿ ಅತಿ ಹೆಚ್ಚು ಅಂದರೆ 30 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರೆ, ಕಡಿಮೆ ಎಂದರೆ ವಿಜಯಪುರ ಹಾಗೂ ರಾಯಚೂರು ಕ್ಷೇತ್ರದಲ್ಲಿ ತಲಾ 8 ಮಂದಿ ಸ್ಪರ್ಧೆಯಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts