More

    ವಾಲ್ಮೀಕಿಯಂತೆ ಪರಿವರ್ತನೆಗೊಳ್ಳಿ

    ಗೋಕಾಕ: ಆದಿಕವಿ ಮಹರ್ಷಿ ವಾಲ್ಮೀಕಿ ತತ್ತ್ವ, ಆದರ್ಶಗಳನ್ನು ಜನರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

    ನಗರದ ಸಚಿವರ ಕಾರ್ಯಾಲಯದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಪ್ರತಿ ವರ್ಷ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದ ಜಯಂತಿಯನ್ನು ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಆಚರಣೆ ಮಾಡಲಾಗಿದ್ದು, ಮನುಷ್ಯ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಇದ್ದರೆ, ಅವನ ಮನಸ್ಸು ಮಹರ್ಷಿ ವಾಲ್ಮೀಕಿಯಂತೆ ಪರಿವರ್ತನೆಯಾಗಬೇಕು ಎಂದರು.
    ಜಿಪಂ ಸದಸ್ಯರಾದ ಟಿ.ಆರ್.ಕಾಗಲ, ಮಡೆಪ್ಪ ತೋಳಿನವರ, ಸುರೇಶ ಪಾಟೀಲ, ಎಸ್.ವಿ.ದೇಮಶೆಟ್ಟಿ , ಜಯಾನಂದ ಹುಣಚ್ಯಾಳಿ, ಅಬ್ದುಲ್ ರಹೇಮಾನ ದೇಸಾಯಿ, ಬಿಜೆಪಿ ನಗರ ಘಟಕದ ಪದಾಧಿಕಾರಿಗಳು, ನಗರಸಭೆ ಸದಸ್ಯರು ಉಪಸ್ಥಿತರಿದ್ದರು

    ಮೂಡಲಗಿ ವರದಿ: ಬೇಡನಾಗಿದ್ದ ರತ್ನಾಕರ ವಾಲ್ಮೀಕಿ ಮಹರ್ಷಿಯಾಗಿ ರಾಮಾಯಣ ಗ್ರಂಥ ರಚಿಸಿದ್ದು ತಮ್ಮೊಳಗೆ ಆದ ಸಾತ್ವಿಕ ಬದಲಾವಣೆಯಿಂದ ಎಂದು ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ ಹೇಳಿದ್ದಾರೆ. ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಸದಸ್ಯರಾದ ಶಿವು ಚಂಡಕಿ, ಈರಣ್ಣ ಕೊಣ್ಣೂರ, ಬಸು ಝಂಡೇಕುರಬರ, ಅಬ್ದುಲ್‌ಗಫಾರ್ ಡಾಂಗೆ, ಅನ್ವರ್ ನದಾಫ್, ಆರ್.ಡಿ.ಸಣ್ಣಕ್ಕಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts