More

    ಯುವ ಪೀಳಿಗೆ ವಿವೇಕಾನಂದ ತತ್ವಾದರ್ಶ ಮೈಗೂಡಿಸಿಕೊಳ್ಳಲಿ

    ಮಳವಳ್ಳಿ: ಭಾರತದ ಅಧ್ಯಾತ್ಮ ಶಕ್ತಿಯನ್ನು ವಿಶ್ವಕ್ಕೆ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದ ಎಂದು ಎಸ್‌ಬಿಐನ ಶಿವನಸಮುದ್ರ ಶಾಖಾ ವ್ಯವಸ್ಥಾಪಕ ರಾಜಶೇಖರ್ ವರ್ಮ ಅಭಿಪ್ರಾಯಪಟ್ಟರು.

    ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿರುವ ಕೆಇಬಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವ ಕಂಡಂತಹ ತತ್ವಜ್ಞಾನಿ, ವೀರಸನ್ಯಾಸಿ ಹಾಗೂ ಅಪರೂಪದ ವ್ಯಕಿ ವಿವೇಕಾನಂದ. ಅವರ ಪ್ರಖರ ಮಾತು ಜಗತ್ತನ್ನೇ ಬೆರಗುಗೊಳಿಸಿತ್ತು ಎಂದು ಸ್ಮರಿಸಿದರು.

    ಲಯನ್ಸ್ ಕ್ಲಬ್ ಅಧ್ಯಕ್ಷ ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ಇಂದಿನ ಯುವ ಪೀಳಿಗೆ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಲು ಸಾಧ್ಯ ಎಂದರು.

    ಮುಖ್ಯಶಿಕ್ಷಕ ಎಚ್.ಸಿ.ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕರಾದ ವೈ.ವಿ.ಸರಸ್ವತಿ, ಶ್ರೀನಿವಾಸ್, ಮೇಘನಾ, ಮಾದಲಾಂಬಿಕಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts