ನವದೆಹಲಿ: ರಾಷ್ಟ್ರಾದ್ಯಂತ ಕರೊನಾ ಪಿಡುಗು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳು ಸೇರಿ ಎಲ್ಲ ಕೋರ್ಟ್ಗಳಲ್ಲೂ ವರ್ಚುಯಲ್ ವಿಚಾರಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ತುರ್ತು ವಿಚಾರಣೆಯ ಅಗತ್ಯ ಇರುವ ಪ್ರಕರಣಗಳಿಗೆ ಮಾತ್ರವೇ ಇದು ಸೀಮಿತವಾಗಿದೆ.
ಆದರೆ, ವರ್ಚುಯಲ್ ವಿಚಾರಣೆಯಲ್ಲಿ ಕೋರ್ಟ್ನ ಶಿಷ್ಟಾಚಾರ ಮರೆತು ವಕೀಲರು ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
ಸುಪ್ರೀಂಕೋರ್ಟ್ನ ವರ್ಚುಯಲ್ ವಿಚಾರಣೆ ವೇಳೆ ವಕೀಲರೊಬ್ಬರು ಟಿಶರ್ಟ್ ಧರಿಸಿ, ಮಂಚದ ಮೇಲೆ ಮಲಗಿಕೊಂಡು ವಾದ ಮಂಡಿಸುವ ಮೂಲಕ ನ್ಯಾಯಪೀಠದಿಂದ ತಲೆ ಮೇಲೆ ಮೊಟಕಿಸಿಕೊಂಡಿದ್ದಾರೆ.
ಇದನ್ನೂ ಓದಿ: ನೇಪಾಳದಲ್ಲಿ ಭಾರತೀಯರಿಗಾಗಿ ಹೊಸ ಪೌರತ್ವ ಕಾಯ್ದೆ ಜಾರಿ
ಹರಿಯಾಣದ ರೇವಾರಿ ಕುಟುಂಬ ನ್ಯಾಯಾಲಯದಲ್ಲಿ ನಡಯುತ್ತಿರುವ ಕೌಟುಂಬಿಕ ಕಲಹ ಕುರಿತ ವಿಚಾರಣೆಯನ್ನು ಬಿಹಾರದ ಜೆಹನಾಬಾದ್ನ ಸೂಕ್ತ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವ ಕುರಿತು ವ್ಯಕ್ತಿಯೊಬ್ಬರು ಸಲ್ಲಿಸಿರುವ ಮೇಲ್ಮನವಿಯ ಕುರಿತು ಸುಪ್ರೀಂಕೋರ್ಟ್ ವರ್ಚುಯಲ್ ವಿಚಾರಣೆ ನಡೆಸುತ್ತಿತ್ತು.
ಈ ವಿಚಾರಣೆಯಲ್ಲಿ ಪಾಲ್ಗೊಂಡಿದ್ದ ವಕೀಲರು ಟಿಶರ್ಟ್ ಧರಿಸಿ, ತಮ್ಮ ಮನೆಯ ಮಂಚದ ಮೇಲೆ ಆರಾಮವಾಗಿ ಮಲಗಿಕೊಂಡು, ವಾದ ಮಂಡಿಸುತ್ತಿದ್ದದ್ದು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಅವರ ಗಮನಕ್ಕೆ ಬಂದಿತು. ತಕ್ಷಣವೇ ಅವರು ವಕೀಲರನ್ನು ತರಾಟೆಗೆ ತೆಗೆದುಕೊಂಡರು.
ತಮ್ಮ ತಪ್ಪನ್ನು ಅರಿತುಕೊಂಡ ವಕೀಲರು ತಕ್ಷಣವೇ ನ್ಯಾಯಮೂರ್ತಿ ಅವರಲ್ಲಿ ಕ್ಷಮೆಯಾಚಿಸಿದರು. ನ್ಯಾಯಮೂರ್ತಿಗಳು ಅದನ್ನು ಅಂಗೀಕರಿಸಿದರು.
ಇದನ್ನೂ ಓದಿ: ಗಲ್ವಾನ್ ಘರ್ಷಣೆ ಬಳಿಕ ಎಲ್ಎಸಿಯಲ್ಲಿ ಭದ್ರತೆ ಹೆಚ್ಚಿಸಿದ ಭಾರತ
ವರ್ಚುಯಲ್ ವಿಚಾರಣೆಯಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಕನಿಷ್ಠ ಕೋರ್ಟ್ನ ಶಿಷ್ಟಾಚಾರಗಳನ್ನು ಪಾಲಿಸಬೇಕು. ಅಚ್ಚುಕಟ್ಟಾದ ಸಭ್ಯವಾದ ಬಟ್ಟೆ ಧರಿಸಿ, ಸೂಕ್ತ ಹಿನ್ನೆಲೆಯಲ್ಲಿ ನಿಂತು ವಿಚಾರಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ನ್ಯಾಯಮೂರ್ತಿ ರವೀಂದ್ರ ಭಟ್ ವಕೀಲರೆಲ್ಲರಿಗೂ ಜೂ.15ರಂದು ಆದೇಶ ನೀಡಿದರು.
ನಾವು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ವರ್ಚುಯಲ್ ವಿಚಾರಣೆಗಳು ಸಾಮಾನ್ಯ ಎಂಬಂತಾಗಿದೆ. ಇಂಥ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವಕೀಲರು ಕನಿಷ್ಠ ನ್ಯಾಯಾಲಯದ ಶಿಷ್ಟಾಚಾರವನ್ನು ಪಾಲಿಸುವುದಿಲ್ಲ ಎಂದರೆ ಹೇಗೆ ಎಂದು ಇದಕ್ಕೂ ಮುನ್ನ ಅವರು ಬೇಸರ ವ್ಯಕ್ತಪಡಿಸಿದ್ದರು.
ಇದಕ್ಕೂ ಮುನ್ನ ಕಳೆದ ಏಪ್ರಿಲ್ನಲ್ಲಿ ರಾಜಸ್ಥಾನ ಹೈಕೋರ್ಟ್ನಲ್ಲಿ ಜಾಮೀನು ಕೋರಿದ ಅರ್ಜಿಯ ವಿಚಾರಣೆಯ ವೇಳೆ ವಕೀಲರೊಬ್ಬರು ಕೇವಲ ಬನಿಯನ್ ತೊಟ್ಟು ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು. ಆಗ ವಿಚಾರಣೆಯನ್ನು ಮುಂದೂಡಿದ್ದ ನ್ಯಾಯಮೂರ್ತಿಗಳು, ಅವರ ಈ ವರ್ತನೆಯ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದರು.
ಲಡಾಖ್ಗೆ ಹರಿಯುವ ಗಾಲ್ವಾನ್ ನದಿ ದಿಕ್ಕನ್ನೇ ಬದಲಿಸುತ್ತಿದೆ ಚೀನಾ; ಉಪಗ್ರಹ ಚಿತ್ರಗಳಿಂದ ಕುತಂತ್ರ ಬಯಲು
Lq