More

    ಅದ್ದೂರಿಯಾಗಿ ಜರುಗಿದ ರಥಯಾತ್ರೆ

    ಕುರುಗೋಡು: ಪಟ್ಟಣಕ್ಕೆ ಭಾನುವಾರ ಬೆಳಗ್ಗೆ ಆಗಮಿಸಿದ ಕರ್ನಾಟಕ 50ರ ಸಂಭ್ರಮದ ಜ್ಯೋತಿ ರಥಯಾತ್ರೆಗೆ ಅದ್ದೂರಿಯಾಗಿ ಸ್ವಾಗತ ದೊರೆಯಿತು.

    ಇದನ್ನೂ ಓದಿ: ಜ್ಯೋತಿ ರಥಯಾತ್ರೆಯ ಅದ್ದೂರಿ ಸಂಚರ

    ಜಿಲ್ಲಾಡಳಿತ, ಜಿಪಂ, ತಾಲೂಕು ಆಡಳಿತ, ಪುರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಪಂ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ರಥಯಾತ್ರೆಯನ್ನು ಅಗ್ನಿಶಾಮಕ ಠಾಣೆ ಬಳಿ ಸ್ವಾಗತಿಸಿದರು.

    ನಂತರ ರಥಯಾತ್ರೆ ಮೆರವಣಿಗೆಗೆ ಶಾಸಕ ಜೆ.ಎನ್.ಗಣೇಶ್ ಮತ್ತು ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ನಾಡ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.

    ಅಗ್ನಿಶಾಮಕ ಠಾಣೆಯಿಂದ ಪ್ರಾರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚಾರಿಸಿ ಪಟ್ಟಣದ ಪ್ರಮುಖ ವೃತ್ತದಲ್ಲಿ ಸಮಾವೇಶಗೊಂಡಿತು. ಪೂರ್ಣಕುಂಭ, ಕಳಸ, ರಾಮ್‌ಡೋಲ್, ತಾಸಿರಾಮ್, ಡೊಳ್ಳು, ಮಂಗಳವಾದ್ಯಗಳು ಮೆರವಣಿಗೆಯ ಮೆರಗು ಹೆಚ್ಚಿಸಿದ್ದವು.

    500 ಮೀ. ಉದ್ದದ ನಾಡಧ್ವಜವನ್ನು ಕೈಯಲ್ಲಿ ಹಿಡಿದು ಮುಖ್ಯ ರಸ್ತೆಯಲ್ಲಿ ಸಾಗಿದ ಸಾವಿರಾರು ವಿದ್ಯಾರ್ಥಿಗಳು ನಾಡ ಪ್ರೇಮ ಮೆರದರು. ಬೆಂಗಳೂರಿನ ಪೀಸ್ ಟ್ವಿನ್ಸ್ ಕಲಾವಿದರ ತಂಡದ ಸದಸ್ಯರು ಮತ್ತು ಬಳ್ಳಾರಿಯ ಡೊಳ್ಳು ಕುಣಿತ ಕಲಾವಿದರ ತಂಡದ ಸದಸ್ಯರು ವಿವಿಧ ಹಾಡುಗಳಿಗೆ ನೃತ್ಯ ಮಾಡಿದರು.

    ಸಂಜೆ ದೊಡ್ಡಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲಾ ಕಾಲೇಜು ವಿದ್ಯಾರ್ಥಿಗಳು ಚಲನಚಿತ್ರ ಗೀತೆಗಳಿಗೆ ಗುಂಪು ನೃತ್ಯ ಪ್ರದರ್ಶಿಸಿ ಗಮನಸೆಳೆದರು.

    ತಹಸೀಲ್ದಾರ್ ಕೆ.ರಾಘವೇಂದ್ರ ರಾವ್, ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮೀ, ಬಿಇಒ ಸಿದ್ಧಿಲಿಂಗಮೂರ್ತಿ, ತಾಪಂ ಇಒ ಕೆ.ವಿ.ನಿರ್ಮಲಾ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೋಹನ್ ಕುಮಾರಿ, ಪ್ರಾಚಾರ್ಯ ವೇಣುಗೋಪಾಲ್, ಉಪ ಪ್ರಾಚಾರ್ಯ ಗಾಳಿ ಮಾರುತಿ, ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts