More

    ಕುಮಾರ ಬಂಗಾರಪ್ಪ ಬಣ ಪದಗ್ರಹಣ

    ಸೊರಬ: ತಾಲೂಕು ಬಿಜೆಪಿ ಸಮಿತಿ ಪದಾಧಿಕಾರಿಗಳ ನೇಮಕಾತಿಯಲ್ಲಿ ಮೂಲ- ವಲಸಿಗ ಸಂಘರ್ಷ ತಾರಕಕ್ಕೇರಿದ್ದು ಯಾವ ಸಮಿತಿ ಅಧಿಕೃತಿ ಎಂಬ ಬಿಕ್ಕಟ್ಟು ನಿರ್ವಣವಾಗಿದೆ.

    ಜಿಲ್ಲಾ ಅಧ್ಯಕ್ಷರು ಘೊಷಣೆ ಮಾಡಿದ್ದ ತಾಲೂಕು ಪದಾಧಿಕಾರಿಗಳು ಮಂಗಳವಾರ ಪದಗ್ರಹಣ ಮಾಡಿದ್ದು ಶಾಸಕ ಕುಮಾರ್ ಬಂಗಾರಪ್ಪ ಬೆಂಬಲಿಗರು ಘೊಷಣೆ ಮಾಡಿರುವ ತಾಲೂಕು ಪದಾಧಿಕಾರಿಗಳು ಬುಧವಾರ ಪದಗ್ರಹಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಕುಮಾರ ಬಂಗಾರಪ್ಪ, ಸಹಿ ಸಂಗ್ರಹ ಮಾಡಿ ರಚನೆ ಮಾಡಿರುವ ಹೊಸ ಪದಾಧಿಕಾರಿಗಳ ಸಮಿತಿಗೆ ನನ್ನ ಸಹಮತ ಇದೆ ಎಂದು ಹೇಳಿದ್ದಾರೆ.

    ಕೆಲವರು ಮಾಡಿದ ಯಡವಟ್ಟಿನಿಂದ ಪಕ್ಷದಲ್ಲಿ ಇಂತಹ ಸಂದರ್ಭಗಳು ಬರುತ್ತವೆ. ಹೆಚ್ಚಿನ ಕಾರ್ಯಕರ್ತರು ತೆಗೆದುಕೊಂಡ ತೀರ್ವನದಂತೆ ನಾವು ನಡೆದುಕೊಳ್ಳಬೇಕಿದೆ, ಇದಕ್ಕೆ ನನ್ನ ಬೆಂಬಲ ಇದೆ ಎಂದರು.

    ಪಟ್ಟಣದ ಖಾಸಗಿ ಹೋಟೆಲ್​ನಲ್ಲಿ ಶಾಸಕರ ಬಣ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲ ಒಂದು ಪಕ್ಷದವರು. ಒಂದು ಎಂಬ ನಿಟ್ಟಿನಲ್ಲಿ ಸಾಗಬೇಕು ಎಂದು ಬಹಳ ದಿನಗಳಿಂದ ಪ್ರಯತ್ನ ನಡೆಸಿದರೂ ಹಲವು ಸಮಸ್ಯೆ ಮತ್ತು ಕೆಲವರಿಂದ ಪಕ್ಷದಲ್ಲಿ ಈಗ ಕಂದಕ ನಿರ್ವಣವಾಗಿದೆ. ಇಂತಹ ವ್ಯವಸ್ಥೆಯಿಂದ ಬೇಸತ್ತ ಕಾರ್ಯಕರ್ತರು 239 ಬೂತ್​ಗಳಲ್ಲಿ ಕೆಲಸ ಮಾಡಿದ ಮುಖಂಡರು ಮತ್ತು ಕಾರ್ಯಕರ್ತರನ್ನು ಗುರುತಿಸಿ ಈ ಮಂಡಲದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ವಿವಿಧ ಶಕ್ತಿ, ಮಹಾಶಕ್ತಿ ಕೇಂದ್ರಗಳಿಗೆ ಆಯ್ಕೆ ಮಾಡಿದ್ದು ಇದಕ್ಕೆ ನನ್ನ ಸಹಮತವಿದೆ. ಇದರಿಂದ ಪಕ್ಷ ಸಂಘಟನೆಗೆ ಒಂದು ವ್ಯವಸ್ಥೆ ನಿರ್ವಣವಾಗಿದೆ. ಅಲ್ಲದೆ ಪಕ್ಷದ ನಿಯಮ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಂತೆಯೇ ನಡೆದುಕೊಳ್ಳಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts