More

    ಕುದುರಂಗಿ ವೀರಭದ್ರಸ್ವಾಮಿ ರಥೋತ್ಸವ

    ಸಕಲೇಶಪುರ: ತಾಲೂಕಿನ ಕುದುರಂಗಿ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಮಂಗಳವಾರ ಸಾವಿರಾರು ಭಕ್ತಾರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

    ಸೋಮವಾರದಿಂದಲೇ ಕುದರಂಗಿ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಜಾತ್ರೆ ಮಹೋತ್ಸವದ ಪ್ರಯುಕ್ತ ವಿವಿಧ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ಮಂಗಳವಾರ ದೇವಾಲಯದ ಮುಂಭಾಗ ಬೆಳಗ್ಗೆ 8.30 ರಿಂದ 8.40 ವರಗೆ ಪುಷ್ಪರಥೋತ್ಸವ ಜರುಗಿತು. ನಂತರ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದು ಬಲಿ ಹೊಡೆಯುವ ಪೂಜಾ ವಿಧಾನಗಳು ಮುಗಿದ ನಂತರ ಮಧ್ಯಾಹ್ನ 12.40ರ ಶುಭಲಗ್ನದಲ್ಲಿ ಬ್ರಹ್ಮರಥೋತ್ಸವ ಜರುಗಿತು. ರಥೋತ್ಸವ ಮುಗಿದ ಮರುಕ್ಷಣವೇ ಭಕ್ತರು ಪ್ರಸಾದಕ್ಕಾಗಿ ಮುಗಿಬಿದಿದ್ದರಿಂದ ಕೆಲಕಾಲ ಗೊಂದಲ ಉಂಟಾಗಿತ್ತು.

    ವಿಶೇಷ: ಪ್ರತಿವರ್ಷ ಶ್ರೀ ವೀರಭದ್ರಸ್ವಾಮಿ ರಥೋತ್ಸವಕ್ಕೆ ಸುಮಾರು ನೂರು ಅಡಿ ಉದ್ದದ ಏಕ ಬೆತ್ತದಿಂದ ರಥ ಎಳೆಯುವುದು ಇಲ್ಲಿನ ವಿಶೇಷಗಳಲ್ಲಿ ಒಂದಾಗಿದೆ. ರಥೋತ್ಸವಕ್ಕಾಗಿ ಅಭಯಾರಣ್ಯದಿಂದ ದೇವಸ್ಥಾನದ ಭಕ್ತರು ಭೆತ್ತ ಆರಸಿ ತರುವುದು ಇಲ್ಲಿನ ಸಂಪ್ರದಾಯಗಳಲ್ಲಿ ಒಂದಾಗಿದೆ. ಒಟ್ಟು ನಾಲ್ಕು ದಿನಗಳ ಜಾತ್ರೆ ಮಹೋತ್ಸವದಲ್ಲಿ ಬುಧವಾರ ಮುಂಜಾನೆ ದೇವರ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ ಈಡುಗಾಯಿ ಸಮರ್ಪಣೆ ನೆರವೇರಲಿದೆ. ಗುರುವಾರ ರಾತ್ರಿ ದೇವರಿಗೆ ಅವಭೃತ ಸ್ನಾನ ಮಾಡಿಸುವುದರೊಂದಿಗೆ ಜಾತ್ರೆಗೆ ತೆರೆಬೀಳಲಿದೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts