ಉತ್ಸಾಹದಿಂದ ತುಂಬಿ ತುಳುಕಿದ ಮೂರು ದಿನಗಳ ಮೇಳದ ಸಮಾರೋಪ ಸಮಾರಂಭಕ್ಕೆ ಕೊಳಗಕ್ಕೆ ಮೊರದಿಂದ ಭತ್ತ ತುಂಬುವ ಮೂಲಕ ಚಾಲನೆ ನೀಡಲಾಯಿತು.
ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ.ಎಂ.ಮಹದೇವಪ್ಪ ಮಾತನಾಡಿ, ವಿಜ್ಞಾನ ಹಾಗೂ ತಂತ್ರಜ್ಞಾನದ ಉಪಯೋಗ ಪಡೆದುಕೊಳ್ಳುವಲ್ಲಿ ರೈತರು ಹಿಂದುಳಿದಿದ್ದಾರೆ. ಸಾಂಪ್ರದಾಯಿಕ ಪದ್ಧತಿಗೆ ಅದರದ್ದೇ ಮಹತ್ವ ಇದೆಯಾದರೂ ಹೊಸ ಪದ್ಧತಿ, ತಂತ್ರಜ್ಞಾನದಿಂದ ವಿಮುಖರಾಗಬಾರದು. ಆದರೆ ಯಾವ ಪದ್ಧತಿಯನ್ನು ಎಲ್ಲಿ ಅಳವಡಿಸಬೇಕು ಎಂಬುದರಲ್ಲಿ ಎಡವುತ್ತಿದ್ದೇವೆ ಎಂದರು.