ಖಾತ್ರಿ ಕಾಮಗಾರಿಯಲ್ಲಿ ಜಾತಿ ಬೇಡ ; ವಿವಿಧ ಸಂಘಟನೆಗಳಿಂದ ಪ್ರತಿಭಟನೆ

blank

ಕೊಪ್ಪಳ: ಜಾತಿ ಆಧರಿಸಿ ನರೇಗಾ ಕಾಮಗಾರಿ ಅನುಷ್ಠಾನ, ಕೂಲಿ ಪಾವತಿ ಮಾಡುವುದು ಬೇಡವೆಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ, ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘ ಹಾಗೂ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಘಟಕದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಎಸ್‌ಸಿ, ಎಸ್‌ಟಿ ಹಾಗೂ ಇತರ ವರ್ಗದವರಿಗೆ ನರೇಗಾ ಕೂಲಿ ಪಾವತಿ ಮಾಡುವ ಕುರಿತು ರಾಜ್ಯ ಸರ್ಕಾರಗಳಿಗೆ ಕೆಲ ಸಲಹೆ ನೀಡಿದೆ. ಕೆಲಸ ಹಾಗೂ ಕೂಲಿ ಪಾವತಿ ವಿಚಾರದಲ್ಲಿಯೂ ಜಾತಿ ಪದ್ಧತಿ ಸರಿಯಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದರ ಮೇಲೆ ಸರ್ಕಾರದ ಆದೇಶ ಪರಿಣಾಮ ಬೀರಲಿದೆ. ಇದರಿಂದ ಕೆಲಸ ನೀಡುವುದು ಹಾಗೂ ಕೂಲಿ ಪಾವತಿ ವಿಳಂಬವಾಗಲಿದೆ. ಕೆಲಸಗಾರರನ್ನು ಜಾತಿ ಆಧಾರದಲ್ಲಿ ವಿಂಗಡಿಸುವುದು ಕಾಯ್ದೆ ಉಲ್ಲಂಘನೆಯಾಗಲಿದೆ.

ಇದರಿಂದಾಗಿ ನರೇಗಾ ಕಾಮಗಾರಿ ಹಾಗೂ ಕೂಲಿ ಪಾವತಿಯನ್ನು ಜಾತಿ ಆಧಾರದಲ್ಲಿ ನಿರ್ಧರಿಸಬಾರದು. ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ದಿನಗೂಲಿ ಮೊತ್ತವನ್ನು 600 ರೂ.ಗೆ ಏರಿಸಬೇಕೆಂದು ಒತ್ತಾಯಿಸಿದರು. ಎಐಎಡಬ್ಲೂೃಯು ರಾಜ್ಯ ಉಪಾಧ್ಯಕ್ಷ ಎಚ್.ಗಂಗಾಧರಯ್ಯ ಸ್ವಾಮಿ, ಜಿಲ್ಲಾ ಅಧ್ಯಕ್ಷ ಬಸವರಾಜ ಮರಕುಂಬಿ, ಕಾರ್ಯದರ್ಶಿ ಸುಂಕಪ್ಪ ಗದಗ, ಸದಸ್ಯರಾದ ಅಂದಪ್ಪ ಬರದೂರ, ಬಾಳಪ್ಪ ಹುಲಿಹೈದರ್, ಕೆ.ಹುಸೇನಪ್ಪ, ಡಿಎಚ್‌ಎಸ್ ಪದಾಧಿಕಾರಿಗಳಾದ ರಮೇಶ ಬಡಗಿ, ಮರಿನಾಗಪ್ಪ ಡಗ್ಗಿ, ನಿಂಗಪ್ಪ ಹಳ್ಳಿ, ಜಿ.ಹುಲಿಗೆಮ್ಮ, ಮರಿಯವ್ವ ಹಾಲಹಳ್ಳಿ, ಗಾಳೆಮ್ಮ ಗುಂಡನವರ ಮತ್ತು ಇತರರಿದ್ದರು.

Share This Article

ಬೇಸಿಗೆಯಲ್ಲಿ ಬೇಗನೆ ತೂಕ ಇಳಿಸಿಕೊಳ್ಳುವುದು ಹೇಗೆ ಗೊತ್ತಾ?  ಈ ಸುಲಭ ಸಲಹೆಗಳನ್ನು ಅನುಸರಿಸಿ…summer

summer: ತೂಕ ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಕೆಲವರು ಇದಕ್ಕಾಗಿ ಆಹಾರ ಕ್ರಮದ ಜೊತೆಗೆ ವ್ಯಾಯಾಮ ಮಾಡುತ್ತಾರೆ.…

ಮದ್ವೆಯಾದ ನಂತ್ರ ಮಹಿಳೆಯರು… ಇದುವರೆಗೂ ನಾವಂದುಕೊಂಡಿದ್ದು ತಪ್ಪು, ಹೊಸ ಅಧ್ಯಯನದಲ್ಲಿ ಅಚ್ಚರಿ ಸಂಗತಿ! Marriage

Marriage : ಸಾಮಾನ್ಯವಾಗಿ ಮದುವೆಯ ನಂತರ ಮಹಿಳೆಯರ ತೂಕ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಅವರು ಎಷ್ಟೇ…

ನಿಮ್ಮ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರವಿಡುವುದು ಹೇಗೆ? Child Care Tips

Child Care Tips: ನೀವು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ಕೊಡಬಾರದು. ನಿಮ್ಮ ಮಗು ನಿಮ್ಮೊಂದಿಗೆ…