More

    ಯುವಕನಿಗೆ ಚೂರಿ ಇರಿತ

    ಬೆಂಗಳೂರು: ಫುಡ್ ಆರ್ಡರ್ ವಿಚಾರಕ್ಕೆ ಫುಡ್ ಡೆಲಿವರಿ ಬಾಯ್ಗೆ ಆತನ ಸ್ನೇಹಿತರೆ ಚೂರಿಯಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಎಂ.ಎಸ್.ಪಾಳ್ಯದ ಸುನೀಲ್ ಹಲ್ಲೆಗೊಳಗಾದವ. ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸುನೀಲ್ ಬಿಟಿಎಂ ಲೇಔಟ್​ನ ಪೇಯಿಂಗ್ ಗೆಸ್ಟ್​ನಲ್ಲಿ ನೆಲೆಸಿದ್ದು, ಫುಡ್ ಡೆಲಿವರಿ ಮಾಡುತ್ತಿದ್ದ. ಅದೇ ಪಿಜಿಯಲ್ಲಿ ನೆಲೆಸಿದ್ದ. ತೇಜಸ್ ಮತ್ತು ಪ್ರವೀಣ್ ಕೂಡ ಅದೇ ಕಂಪನಿಯಲ್ಲಿ ಫುಡ್ ಡೆಲಿವರಿ ಮಾಡುತ್ತಿದ್ದರು. ಶುಕ್ರವಾರ (ಫೆ.28) ತಡರಾತ್ರಿ ಫುಡ್ ಡೆಲಿವರಿ ವಿಚಾರಕ್ಕೆ ಮೂವರ ನಡುವೆ ಗಲಾಟೆಯಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು, ತೇಜಸ್ ಮತ್ತು ಪ್ರವೀಣ್ ಸೇರಿ ಸುನೀಲ್​ಗೆ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡು ಪಿಜಿ ಸಮೀಪದ ಹೋಟೆಲ್ ಬಳಿ ಬಿದ್ದಿದ್ದ ಸುನೀಲ್​ನನ್ನು ಶನಿವಾರ ಬೆಳಗಿನ ಜಾವ 5 ಗಂಟೆಯಲ್ಲಿ ಮತ್ತೊಬ್ಬ ಸ್ನೇಹಿತ ನಾಗರಾಜ್ ಫುಡ್ ಡೆಲಿವರಿ ಮಾಡಿ ಪಿಜಿಗೆ ವಾಪಸ್ ಆಗುತ್ತಿದ್ದಾಗ ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ನಾಗರಾಜ್ ನೀಡಿದ ದೂರಿನ ಅನ್ವಯ ಸುನೀಲ್​ನ ಹೇಳಿಕೆ ಪಡೆದು ಪಿಜಿ ಸಹನಿವಾಸಿಗಳಾದ ತೇಜಸ್ (25) ಮತ್ತು ಪ್ರವೀಣ್ (26) ನನ್ನು ಮೈಕೋಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts