ಅಹಮದಬಾದ್: ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮ್ಯಾನ್ಗಳಾದ ವೆಂಕಟೇಶ್ ಅಯ್ಯರ್, ರಿಂಕು ಸಿಂಗ್ ಸ್ಪೋಟಕ ಬ್ಯಾಟಿಂಗ್ ಫಲವಾಗಿ ಕೊಲ್ಕತ ನೈಟ್ರೈಡರ್ಸ್ ತಂಡವು ಗುಜರಾತ್ ಟೈಟಾನ್ಸ್ ಎದುರು 3 ವಿಕೆಟ್ಗಳ ಜಯ ಸಾಧಿಸಿದೆ.
ಅಹಮದಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 4 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತ್ತು.
ಸಾಯಿ ಸುದರ್ಶನ್-ವಿಜಯ್ ಶಂಕರ್ ಅರ್ಧಶತಕ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ಟೈಟಾನ್ಸ್ ತಂಡವು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮ್ಯಾನ್ ಸಾಯಿ ಸುದರ್ಶನ್(53 ರನ್, 38 ಎಸೆತ, 3 ಬೌಂಡರಿ, 2 ಸಿಕ್ಸರ್), ಆಲ್ರೌಂಡರ್ ವಿಜಯ್ ಶಂಕರ್ (63 ರನ್, 24 ಎಸೆತ, 4 ಬೌಂಡರಿ, 5 ಸಿಕ್ಸರ್) ಫಲವಾಗಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿ 205ರನ್ಗಳ ಬೃಹತ್ ಮೊತ್ತವನ್ನು ಗುರಿಯನ್ನಾಗಿ ನೀಡಿತ್ತು.
ಇದನ್ನೂ ಓದಿ: VIDEO| ದಯವಿಟ್ಟು CSK ಕ್ಯಾಪ್ಟನ್ ಆಗಿ ಮುಂದುವರೆಯಿರಿ; ಧೋನಿಗೆ ವಿಶೇಷ ಮನವಿ ಮಾಡಿದ ಪೈಲಟ್
ವೆಂಕಟೇಶ್ ಅಯ್ಯರ್-ರಿಂಕು ಸಿಂಗ್ ಸ್ಪೋಟಕ ಬ್ಯಾಟಿಂಗ್
ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಕೊಲ್ಕತ ತಂಡವು ಆರಂಭಿಕ ವೈಫಲ್ಯದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮ್ಯಾನ್ ವೆಂಕಟೇಶ್ ಅಯ್ಯರ್(83 ರನ್, 40 ಎಸೆತ, 8 ಬೌಂಡರಿ, 5 ಸಿಕ್ಸರ್), ನಾಯಕ ನಿತೀಶ್ ರಾಣಾ(45 ರನ್, 29 ಎಸೆತ, 4 ಬೌಂಡರಿ, 3 ಸಿಕ್ಸರ್), ರಿಂಕು ಸಿಂಗ್(48 ರನ್, 21 ಎಸೆತ, 1 ಬೌಂಡರಿ, 6 ಸಿಕ್ಸರ್). ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮ್ಯಾನ್ ರಿಂಕು ಸಿಂಗ್ 20ನೇ ಓವರ್ನಲ್ಲಿ ಸಿಡಿಸಿದ 5 ಸಿಕ್ಸರ್ಗಳ ಫಲವಾಗಿ ಕೊಲ್ಕತ ತಂಡವು 7 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ ಜಯದ ನಗೆ ಬೋಈರಿತ್ತು.
ಗುಜರಾತ್ ಪರ ರಶಿದ್ ಖಾನ್(4-0-37-3), ಅಲ್ಜಾರಿ ಜೋಸೆಫ್(4-0-27-2), ಜೋಶುವಾ ಲಿಟಲ್(4-0-45-1), ಮೊಹಮ್ಮದ್ ಶಮಿ(4-0-28-1) ವಿಕೆಟ್ ಪಡೆದಿದ್ಧಾರೆ.