ಲಾಹೋರ್: ಹತ್ಯೆಯಾದ ಖಲಿಸ್ತಾನ್ ಲಿಬರೇಷನ್ ಫೋರ್ಸ್ನ (ಕೆಎಲ್ಎಫ್) ಮುಖ್ಯಸ್ಥ ಹರ್ಮೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಿಎಚ್ಡಿ ಶವವನ್ನು ಭಾರತಕ್ಕೆ ರವಾನಿಸಲು ಪಾಕ್ ಹಿಂದೆ ಸರಿದಿದೆ.
ಹರ್ಮೀತ್ಸಿಂಗ್ ಸುಳ್ಳು ದಾಖಲೆಗಳ ಮೂಲಕ ಪಾಕಿಸ್ತಾನದಲ್ಲಿ ವಾಸ ಮಾಡುತ್ತಿದ್ದರಿಂದ ಆತನ ಶವ ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಪಾಕ್ ತಿಳಿಸಿದೆ.
ಪಂಜಾಬ್ನ ಅಮೃತಸರದಲ್ಲಿರುವ ಹರ್ಮೀತ್ಸಿಂಗ್ ಕುಟುಂಬದವರು ಶವ ಹಸ್ತಾಂತರಿಸುವಂತೆ ಮನವಿ ಸಲ್ಲಿಸಿದ್ದರು.
ಹರ್ಮೀತ್ ಸಿಂಗ್ನನ್ನು 2 ದಿನಗಳ ಹಿಂದೆ ಲಾಹೋರ್ ಸಮೀಪದ ಡೇರಾ ಚಾಹಲ್ ಗುರುದ್ವಾರದಲ್ಲಿ ಸ್ಥಳೀಯ ಗ್ಯಾಂಗ್ ಗುಂಡು ಹಾರಿಸಿ ಕೊಲೆ ಮಾಡಿತ್ತು. ಮಾದಕ ವಸ್ತು ಕಳ್ಳಸಾಗಣೆ ವ್ಯವಹಾರದ ಹಿನ್ನೆಲೆಯಲ್ಲಿ ನಡೆದ ಗಲಾಟೆಯಲ್ಲಿ ಆತನನ್ನು ಕೊಲೆ ಮಾಡಲಾಗಿದೆ.
ಪಾಕಿಸ್ತಾನ ಹಾಗೂ ಭಾರತದಲ್ಲಿ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿದ್ದ. ಹೀಗಾಗಿ ಈತ 2 ರಾಷ್ಟ್ರಗಳಿಗೆ ಬೇಕಾದ ಪ್ರಮುಖ ಆರೋಪಿಯಾಗಿದ್ದ. (ಏಜೆನ್ಸೀಸ್)