ಬೆಂಗಳೂರು: ಇದೀಗ ಸದ್ಯದ ಮಟ್ಟಿಗೆ ಜೆಡಿಎಸ್ ಯುಪಿಎ ಬಣದಲ್ಲಿರುತ್ತೋ ಅಥವಾ ಎನ್ಡಿಎ ಬಣಕ್ಕೆ ಸೇರಲಿದೆಯೋ ಎನ್ನುವುದು ಅಧಿಕೃತವಾಗಿ ತಿಳಿಯದೇ ಇದ್ದು ಮಾಜಿ ಸಿಎಂ ಕುಮಾರಸ್ವಾಮಿ ಕಾದು ನೋಡಬೇಕು ಎನ್ನುತ್ತಿದ್ದಾರೆ. ಈ ನಡುವೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ರನ್ನು ಜೆಡಿಎಸ್ಗೆ ವಿಪಕ್ಷಗಳ ಸಭೆಯಲ್ಲಿ ಯಾಕೆ ಆಹ್ವಾನ ಇರಲಿಲ್ಲ ಎಂದು ಪ್ರಶ್ನಿಸಿದಾಗ ವಿಭಿನ್ನವಾಗಿ ಉತ್ತರಿಸಿದ್ದಾರೆ.
ಇದನ್ನೂಓದಿ: ವಿಪಕ್ಷಗಳ ಸಮರಾಭ್ಯಾಸ; ರಾಜಧಾನಿಯಲ್ಲಿ ಇಂದು, ನಾಳೆ ಎರಡನೇ ಸಭೆ
ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಸಿ. ವೇಣುಗೋಪಾಲ್, “ಇಲ್ಲಿ ಕಾಂಗ್ರೆಸ್ ಒಂದೇ ನಿರ್ಧಾರ ಕೈಗೊಳ್ಳೋದಿಲ್ಲ. ಎಲ್ಲಾ 26 ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ನಿರ್ಧಾರ ಕೈಗೊಳ್ಳಲಿವೆ. ಸೋನಿಯಾ ಗಾಂಧಿಯೂ ಈ ಸಭೆಯಲ್ಲಿ ಭಾಗಿ ಆಗಲಿದ್ದು ಈ ಸಭೆಯ ಶಕ್ತಿ ಹೆಚ್ಚಾಗಲಿದೆ.
ಯುಪಿಎ ಹೊರತಾಗಿಯೂ ಇತರ ರಾಜಕೀಯ ಪಕ್ಷಗಳು ಭಾಗಿಯಾಗ್ತವೆ. ಯುಪಿಎ ನೇತೃತ್ವವೋ ಅಥವೇ ಬೇರೆ ಅಲಯನ್ಸೋ ಎನ್ನುವುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ” ಎಂದಿದ್ದಾರೆ.
ಈ ಸಂದರ್ಭ ಜೆಡಿಎಸ್ಗೆ ಆಹ್ವಾನ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,” ಯಾರು ಬಿಜೆಪಿ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿದ್ದಾರೆ ಅವರು ಬರ್ತಾರೆ. ಆಹ್ವಾನ ಕೊಡುವ ಅಗತ್ಯವೇ ಇಲ್ಲ. ಅವರೇ ಭಾಗಿಯಾಗ್ತಾರೆ. ಅದಲ್ಲದೇ ಕಳೆದ ಬಾರಿ ಜೆಡಿಎಸ್ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ” ಎಂದಿದ್ದಾರೆ.