More

    ಕರೊನಾ ಭೀತಿಯ ನಡುವೆ ಗಡಿಯಲ್ಲಿ ದಾಳಿ-ಪ್ರತಿದಾಳಿ: ಪಾಕ್‌ ಉಗ್ರನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

    ಕಾಶ್ಮೀರ: ಎಲ್ಲೆಡೆ ಕರೊನಾ ಭೀತಿ ಇದ್ದರೂ, ಗಡಿಭಾಗದಲ್ಲಿ ಉಗ್ರರ ಹೋರಾಟ ಮಾತ್ರ ನಿಂತಿಲ್ಲ. ಪಾಕಿಸ್ತಾನವು ತನ್ನ ಕುತಂತ್ರ ಬುದ್ಧಿ ಉಪಯೋಗಿಸಿ, ಭಾರತದ ಮೇಲೆ ದಾಳಿ ಮಾಡಲು ಇನ್ನಷ್ಟು ಉಗ್ರರ ಸಂಘಟನೆಯನ್ನು ಸೃಷ್ಟಿಸಿ ಹೊಂಚು ಹಾಕುತ್ತಿದ್ದರೂ, ಅವರನ್ನು ಹೊಡೆದುರುಳಿಸುವಲ್ಲಿ ಭಾರತದ ಯೋಧರು ಸದಾ ಸಿದ್ಧರಾಗಿ ನಿಂತಿದ್ದಾರೆ.

    ಇದೇ ರೀತಿ, ಇಂದು ಬೆಳ್ಳಂಬೆಳಗ್ಗೆಯೇ ಶೋಪಿಯಾನ್ ಜಿಲ್ಲೆಯ ಡೈರೂ ಕೀಗಮ್ ಗ್ರಾಮದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಯೋಧರು ಓರ್ವ ಉಗ್ರನನ್ನು ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.

    ಪಾಕಿಸ್ತಾನದ ಉಗ್ರರು ಅಡಗಿ ಕುಳಿತಿರುವ ಮಾಹಿತಿ ಸಿಕ್ಕಿದ್ದೇ ತಡ, ಅದನ್ನು ಮೊದಲಿಗೆ ಖಚಿತ ಪಡಿಸಿಕೊಂಡ ಭಾರತೀಯ ಸೇನೆಯು, ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಜತೆ ಸೇರಿ ಶೋಧ ಕಾರ್ಯಾಚರಣೆಯನ್ನು ನಡೆಸಿತ್ತು. ಈ ವೇಳೆಯೇ ಅತ್ತ ಉಗ್ರರು ಗುಂಡು ಹಾರಿಸಿದರು.

    ತಡ ಮಾಡದ ಭಾರತೀಯ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದರು, ಇದರಿಂದ ಓರ್ವ ಉಗ್ರ ಹತ್ಯೆಯಾಗಿದ್ದಾನೆ. ಇನ್ನೂ 2-3 ಉಗ್ರರು ಸೆರೆಸಿಕ್ಕಿದ್ದಾ ಎಂದು ಪ್ರಾಥಮಿಕವಾಗಿ ವರದಿಯಾಗಿದೆ. ಆದರೆ ಈ ಸುದ್ದಿ ಇನ್ನೂ ಖಚಿತವಾಗಿಲ್ಲ. ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts