ಬೆಂಗಳೂರು: ಐಪಿಎಲ್ 17ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲ 10 ತಂಡಗಳು ಭಾನುವಾರ ಆಟಗಾರರ ರಿಟೇನ್ ಮತ್ತು ರಿಲೀಸ್ ಪಟ್ಟಿಯನ್ನು ಪ್ರಕಟಿಸಿವೆ. ಇದರನ್ವಯ ಕರ್ನಾಟಕದ ಮೂವರು ಪ್ರಮುಖ ಆಟಗಾರರು ತಂಡಗಳಿಂದ ರಿಲೀಸ್ ಆಗಿದ್ದಾರೆ. ನಿರೀಕ್ಷೆಯಂತೆಯೇ ಕೆಲ ಪ್ರಮುಖ ಆಟಗಾರರು ತಂಡಗಳಲ್ಲಿ ರಿಟೇನ್ ಆಗಿದ್ದಾರೆ.
ಕರ್ನಾಟಕದ ಅನುಭವಿ ಬ್ಯಾಟರ್ಗಳಾದ ಮನೀಷ್ ಪಾಂಡೆ ಮತ್ತು ಕರುಣ್ ನಾಯರ್ ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ಸ್ಜೈಂಟ್ಸ್ನಿಂದ ಹೊರಬಿದ್ದಿದ್ದಾರೆ. ಮತ್ತೋರ್ವ ಕನ್ನಡಿಗ ಕೆಸಿ ಕಾರ್ಯಪ್ಪ ರಾಜಸ್ಥಾನದಿಂದ ರಿಲೀಸ್ ಆಗಿದ್ದಾರೆ.
ಉಳಿದಂತೆ ಕೆಎಲ್ ರಾಹುಲ್, ಕೆ. ಗೌತಮ್ ಲಖನೌದಲ್ಲಿ ಉಳಿದಿದ್ದರೆ, ದೇವದತ್ ಪಡಿಕಲ್ ರಾಜಸ್ಥಾನದಿಂದ ಲಖನೌಗೆ ವರ್ಗಾವಣೆಯಾಗಿದ್ದಾರೆ. ಮಯಾಂಕ್ ಅಗರ್ವಾಲ್ ಸನ್ರೈಸರ್ಸ್, ಪ್ರಸಿದ್ಧಕೃಷ್ಣ ರಾಜಸ್ಥಾನ, ಪ್ರವಿಣ್ ದುಬೆ ಡೆಲ್ಲಿ, ಅಭಿನವ್ ಮನೋಹರ್ ಗುಜರಾತ್, ವಿದ್ವತ್ ಕಾವೇರಪ್ಪ ಪಂಜಾಬ್ ಕಿಂಗ್ಸ್, ವೈಶಾಕ್ ವಿಜಯ್ಕುಮಾರ್, ಮನೋಜ್ ಭಾಂಡಗೆ ಆರ್ಸಿಬಿಯಲ್ಲಿ ರಿಟೇನ್ ಆಗಿದ್ದಾರೆ.
ಮುಂಬರುವ IPL ಹರಾಜಿಗೆ 10 ತಂಡಗಳ ಖಾತೆಯಲ್ಲಿ ಬಾಕಿ ಉಳಿದಿರುವ ಮೊತ್ತ ಹೀಗಿದೆ…