More

    ಐಪಿಎಲ್​ನಲ್ಲಿ ಕರ್ನಾಟಕದ ಯಾವ ಕ್ರಿಕೆಟಿಗ ರಿಟೇನ್​? ಯಾರು ರಿಲೀಸ್? ಇಲ್ಲಿದೆ ವಿವರ…

    ಬೆಂಗಳೂರು: ಐಪಿಎಲ್​ 17ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲ 10 ತಂಡಗಳು ಭಾನುವಾರ ಆಟಗಾರರ ರಿಟೇನ್​ ಮತ್ತು ರಿಲೀಸ್​ ಪಟ್ಟಿಯನ್ನು ಪ್ರಕಟಿಸಿವೆ. ಇದರನ್ವಯ ಕರ್ನಾಟಕದ ಮೂವರು ಪ್ರಮುಖ ಆಟಗಾರರು ತಂಡಗಳಿಂದ ರಿಲೀಸ್​ ಆಗಿದ್ದಾರೆ. ನಿರೀಕ್ಷೆಯಂತೆಯೇ ಕೆಲ ಪ್ರಮುಖ ಆಟಗಾರರು ತಂಡಗಳಲ್ಲಿ ರಿಟೇನ್​ ಆಗಿದ್ದಾರೆ.

    ಕರ್ನಾಟಕದ ಅನುಭವಿ ಬ್ಯಾಟರ್​ಗಳಾದ ಮನೀಷ್​ ಪಾಂಡೆ ಮತ್ತು ಕರುಣ್​ ನಾಯರ್​ ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಲಖನೌ ಸೂಪರ್ಸ್​ಜೈಂಟ್ಸ್​ನಿಂದ ಹೊರಬಿದ್ದಿದ್ದಾರೆ. ಮತ್ತೋರ್ವ ಕನ್ನಡಿಗ ಕೆಸಿ ಕಾರ್ಯಪ್ಪ ರಾಜಸ್ಥಾನದಿಂದ ರಿಲೀಸ್​ ಆಗಿದ್ದಾರೆ.

    ಉಳಿದಂತೆ ಕೆಎಲ್​ ರಾಹುಲ್​, ಕೆ. ಗೌತಮ್​ ಲಖನೌದಲ್ಲಿ ಉಳಿದಿದ್ದರೆ, ದೇವದತ್​ ಪಡಿಕಲ್​ ರಾಜಸ್ಥಾನದಿಂದ ಲಖನೌಗೆ ವರ್ಗಾವಣೆಯಾಗಿದ್ದಾರೆ. ಮಯಾಂಕ್​ ಅಗರ್ವಾಲ್​ ಸನ್​ರೈಸರ್ಸ್​, ಪ್ರಸಿದ್ಧಕೃಷ್ಣ ರಾಜಸ್ಥಾನ, ಪ್ರವಿಣ್​ ದುಬೆ ಡೆಲ್ಲಿ, ಅಭಿನವ್​ ಮನೋಹರ್​ ಗುಜರಾತ್​, ವಿದ್ವತ್​ ಕಾವೇರಪ್ಪ ಪಂಜಾಬ್​ ಕಿಂಗ್ಸ್​, ವೈಶಾಕ್​ ವಿಜಯ್​ಕುಮಾರ್​, ಮನೋಜ್​ ಭಾಂಡಗೆ ಆರ್​ಸಿಬಿಯಲ್ಲಿ ರಿಟೇನ್​ ಆಗಿದ್ದಾರೆ.

    ಮುಂಬರುವ IPL ಹರಾಜಿಗೆ 10 ತಂಡಗಳ ಖಾತೆಯಲ್ಲಿ ಬಾಕಿ ಉಳಿದಿರುವ ಮೊತ್ತ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts