More

    15 ದಿನದೊಳಗೆ ನಿವೇಶನ ನಿರ್ಮಾಣ ಪೂರ್ಣಗೊಳಿಸಿ,ನ್ಯಾಯಾಧೀಶ

    ಚಿತ್ರದುರ್ಗ ಅಲೆಮಾರಿ,ಅರೆ ಅಲೆಮಾರಿ ಸಮುದಾಯ ಸುಡುಗಾಡು ಸಿದ್ದರ ಕಾಲನಿಗೆ ಸೋಮವಾರ ಕಾನೂನು ಸೇವೆಗಳ ಪ್ರಾಧಿಕಾರದ ಕಾರ‌್ಯದರ್ಶಿ,ನ್ಯಾ ಯಾಧೀಶ ಬಿ.ಕೆ.ಗಿರೀಶ್ ಭೇಟಿ ನೀಡಿ ಪರಿಶೀಲಿಸಿ,ನಿವೇಶನಗಳ ಅಭಿವೃದ್ಧಿ ಕೆಲಸವನ್ನು 15 ದಿನದೊಳಗೆ ಪೂರ್ಣಗೊಳಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಧಮ್ಮ ಕೇಂದ್ರ,ವಿಮುಕ್ತಿ ವಿದ್ಯಾ ಸಂಸ್ಥೆ,ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ,ಅಲೆಮಾರಿಗಳ ಸಂಘಟನೆಗಳ ಮನವಿಗೆ ಸ್ಪಂದಿಸಿ ಕಾಲನಿಗೆ ಭೇಟಿ ನೀಡಿದ್ದ ನ್ಯಾಯಾಧೀಶರು,ತ್ವರಿತವಾಗಿ ಪೂರ್ಣಗೊಳಿಸ ಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಅವರು ದಾವಣಗೆರೆ ರಸ್ತೆಯ ಲ್ಲಿರುವ ಟೆಂಟ್‌ಗಳಿಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ವಿದ್ಯುತ್ ಸಂಪರ್ಕ,ಶೌಚಗೃಹ ವ್ಯವಸ್ಥೆ,ರೇಷನ್ ಕಾರ್ಡ್ ಹಾಗೂ ಒಂದೆರೆಡು ತಿಂಗಳು ಪಡಿತರ ವಿತರಿಸುವಂತೆ ತಿಳಿಸಿದರು. ಬೆಸ್ಕಾ,ಜಿಪಂ ಸಿಪಿಒ ಹಾಗೂ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಅಗತ್ಯ ಸೂಚನೆ ನೀಡಿದರು.ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಲೆಮಾರಿ ಕೋಶದ ಜಿಲ್ಲಾ ವ್ಯವಸ್ಥಾಪಕ ಎಂ.ತಿಮ್ಮರಾಯಪ್ಪ,ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧಿ ಕಾರಿಗಳಾದ ಸಿ.ಎನ್.ಮಾರುತಿ,ಫಾರೀಯಾ,ಎಂ.ಕೆ.ಹಟ್ಟಿ ಗ್ರಾಪಂ ಪಿಡಿಒ ಪಾತಣ್ಣ,ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್ ವಿಮುಕ್ತಿ ವಿದ್ಯಾ ಸಂಸ್ಥೆ ನಿರ್ದೇಶಕ ಆರ್.ವಿಶ್ವಸಾಗರ್,ಬಾಬು,ಕೃಷ್ಣಪ್ಪ,ಗುರುರಾಜ್,ಎಸ್.ನೀಲಾಆನಂದ್,ಕೆ.ಲೋಕೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts