ಬೆಂಗಳೂರು: ಕಿರುತೆರೆ ವೀಕ್ಷಕರು ಸಂಜೆಯಾದರೆ ಧಾರಾವಾಹಿಗಳನ್ನು ನೋಡಲು ಎಷ್ಟು ಕಾತುರದಿಂದ ಕಾಯುತ್ತಾರೋ, ಹಾಗೆಯೇ ತಮ್ಮ ಧಾರಾವಾಹಿ ಎಷ್ಟನೇ ಸ್ಥಾನದಲ್ಲಿದೆ ಎಂದು ತಿಳಿದುಕೊಳ್ಳಲೂ ಕೌತುಕರಾಗಿರುತ್ತಾರೆ. ಅಂತೆಯೇ ಈ ವಾರದ ಕನ್ನಡ ಸೀರಿಯಲ್ಗಳ ಟಿಆರ್ಪಿ ಬಿಡುಗಡೆಯಾಗಿದ್ದು, ನಿಮಗೊಂದು ಸರ್ಪ್ರೈಸ್ ಕಾದಿದೆ.
ಹೌದು, ಕೆಲ ವಾರಗಳಿಂದ ಟಾಪ್ 5 ಸ್ಥಾನಗಳಲಿದ್ದ ಧಾರಾವಾಹಿಗಳಿಗೆ ಸೆಡ್ಡು ಹೊಡೆಯುವಂತೆ ಒಂದು ಧಾರವಾಹಿ ಟಾಪ್ 5 ಸ್ಥಾನದೊಳಗೆ ತನ್ನ ಸ್ಥಾನವನ್ನು ಭದ್ರ ಮಾಡಿಕೊಳ್ಳುವತ್ತ ಕಾಲಿಡುತ್ತಿದೆ. ಆ ಧಾರಾವಾಹಿ ಯಾವುದೆಂದು ತಿಳಿದುಕೊಳ್ಳುವ ಮುನ್ನ ನಂ 1 ಸ್ಥಾನದಲ್ಲಿರುವ ಧಾರಾವಾಹಿ ಯಾವುದೆಂದು ತಿಳಿದುಕೊಳ್ಳೋಣ.
ಪುಟ್ಟಕ್ಕನ ಮಕ್ಕಳು
ಎಂದಿನಂತೆ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಂ 1 ಸ್ಥಾನದಲ್ಲಿದೆ. ಇಷ್ಟು ದಿನ ಸ್ನೇಹಾ ಹಾಗೂ ಕಂಠಿ ಮದುವೆಯಾಗುತ್ತಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮನೆ ಮಾಡಿತ್ತು. ಈಗ ಕಂಠಿ-ಸ್ನೇಹಾ ಮದುವೆಯಾಗಿದೆ. ಸ್ನೇಹಾಗೆ ಕಂಠಿ ಮೇಲೆ ಪ್ರೀತಿಯಿದ್ದರೂ ಅವನು ಬಲವಂತವಾಗಿ ತಾಳಿ ಕಟ್ಟಿದ್ದಾನೆ. ಇದರಿಂದ ಸ್ನೇಹಾಗೆ ಕಂಠಿ ಮೇಲೆ ಕೋಪ ಹೆಚ್ಚಾಗಿದೆ. ಧಾರಾವಾಹಿ ಕಥೆ ಮುಂದೇನಾಗಬಹುದು ಎಂಬ ಕುತೂಹಲವನ್ನು ಉಳಿಸಿಕೊಂಡಿರುವುದರಿಂದ ‘ಪುಟ್ಟಕ್ಕನ ಮಕ್ಕಳು’ ಟಿಆರ್ಪಿಯಲ್ಲಿ ನಂ 1 ಸ್ಥಾನ ಉಳಿಸಿಕೊಂಡಿದೆ.
ಗಟ್ಟಿಮೇಳ
ಇನ್ನು ಗಟ್ಟಿಮೇಳ ಸಿರೀಯಲ್ನಲ್ಲಿ ನಾಯಕ ವೇದಾಂತ್ ಸಹೋದರ ವಿಕ್ರಾಂತ್ ಸತ್ತಿರುವ ವಿಷಯ ಅಮೂಲ್ಯಾ ಹಾಗೂ ವೇದಾಂತ್ಗೆ ಬಿಟ್ಟರೆ, ಮನೆಯವರಿಗೆ ಗೊತ್ತಿಲ್ಲ. ಬುಧವಾರ ಪ್ರಸಾರವಾದ ಸಂಚಿಕೆಯಲ್ಲಿ ವಿಕ್ರಾಂತ್ ಸಾವಿಗೆ ಅಗ್ನಿಯೇ ಕಾರಣ ಎಂದು ತೋರಿಸಲಾಗಿದೆ. ಹಾಗೆಯೇ ವೇದಾಂತ್ ಪತ್ನಿ ಅಮೂಲ್ಯಾ ಸುಹಾಸಿನಿಗೆ ಸ್ವಲ್ಪ ದಿನಗಳಲ್ಲಿಯೇ ನಿಮ್ಮ ನಾಟಕ ಬಯಲಾಗಲಿದೆ ಎಂದು ವಾರ್ನ್ ಮಾಡಿರುವುದು ವೀಕ್ಷಕರನ್ನು ಹಿಡಿದಿಡಲು ಕಾರಣವಾಗಿದೆ.
ಅಮೃತಧಾರೆ
ಅಮೃತಧಾರೆ ಶುರುವಾದಾಗಿನಿಂದಲೂ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಕೆಲವು ವಾರಗಳಿಂದ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಈ ವಾರ ಕೂಡ ಮೂರನೇ ಸ್ಥಾನದಲ್ಲಿದ್ದು, ವೀಕ್ಷಕರ ಸಂಖ್ಯೆ ಕೂಡ ಹೆಚ್ಚಾಗಿದೆ. ಧಾರಾವಾಹಿಯಲ್ಲಿ ರಾಜೇಶ್ ನಟರಂಗ, ಛಾಯಾ ಸಿಂಗ್ ಅಭಿನಯ ವೀಕ್ಷಕರಿಗೆ ಇಷ್ಟವಾಗಿದೆ. ಜತೆಗೆ ಸಂಭಾಷಣೆ ಕೂಡ ಜನರು ಮನಸ್ಸು ಗೆದ್ದಿದೆ.
ಶ್ರೀರಸ್ತು ಶುಭಮಸ್ತು
ಶ್ರೀರಸ್ತು ಶುಭಮಸ್ತು ಧಾರಾವಾಹಿ ಕೂಡ ಎಂದಿನಂತೆ ಟಾಪ್ 5 ಸ್ಥಾನದಲ್ಲಿದೆ. ಪತ್ರಿಕೆಯಲ್ಲಿ ಮಾಧವ್ ಹಾಗೂ ತುಳಸಿ ಬಗ್ಗೆ ಬರೆದಾಗಿನಿಂದಲೂ ಮುಂದೇನಾಗಬಹುದು ಎಂಬ ವೀಕ್ಷಕರ ಕುತುಹೂಲ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಇತ್ತ ಮಾಧವ್ ಕಿರಿಯ ಮಗನ ಮದುವೆ ತಯಾರಿ ನಡೆಯುತ್ತಿದ್ದು, ಇನ್ನೇನು ಕ್ಯಾನ್ಸಲ್ ಆಗುತ್ತೆ ಅನ್ನುವಷ್ಟರಲ್ಲಿ ಅನ್ನು ಮಾಧವ್ ತಡೆದಿದ್ದಾರೆ. ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಹಿರಿಯ ನಟಿ ಸುಧಾರಾಣಿ, ಮಾಧವ್ ಪಾತ್ರದಲ್ಲಿ ಅಜಿತ್ ಹಂದೆ ಗಮನಸೆಳೆಯುತ್ತಿದ್ದಾರೆ.
ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ
ಈ ಮೊದಲೇ ಹೇಳಿದಂತೆ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿ ಮೊದಲ ಬಾರಿಗೆ ಟಾಪ್ 5 ಸ್ಥಾನದಲ್ಲಿ ಬಂದು ನಿಂತಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯ, ರಾಷ್ಟ್ರದ ಹಲವಾರು ಭಾಗಳಲ್ಲಿ ಭಕ್ತರನ್ನು ಹೊಂದಿರುವ ಶ್ರೀರೇಣುಕಾ ಯಲ್ಲಮ್ಮ ಮಹ್ಮಾತೆಯ ಕುರಿತಾದ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿ ಜನವರಿಯಂದು ಪ್ರಸಾರವಾಯಿತು. ಇದೀಗ ಧಾರಾವಾಹಿ ಟಾಪ್ 5 ಗೆ ಬಂದು ನಿಂತಿದ್ದು, ಕೆಲವೇ ದಿನಗಳಲ್ಲಿ ಇತರ ಧಾರಾವಾಹಿಗಳನ್ನು ಹಿಂದಿಕ್ಕಿ ಟಾಪ್ 1 ಗೆ ಬಂದು ನಿಂತರೂ ಆಶ್ಚರ್ಯವಿಲ್ಲ. ‘ನಮ್ಮ ಲಚ್ಚಿ’ ಧಾರಾವಾಹಿ ಕೂಡ ಟಿಆರ್ಪಿಯಲ್ಲಿ ಹಿಂದೆ ಬಿದ್ದಿಲ್ಲ.
ಪದವೀಧರರಿಗೆ BPCLನಲ್ಲಿದೆ ಅವಕಾಶ; 138 ಹುದ್ದೆಗಳಿಗೆ ಅರ್ಜಿ ಆಹ್ವಾನ