More

    ಭೋಗಾಪುರೇಶ ದೇಗುಲ ಜೀರ್ಣೋದ್ಧಾರವಾಗಲಿ


    ಸುವಿದ್ಯೇಂದ್ರತೀರ್ಥರ ಸಲಹೆ | ನವಲಿಯಲ್ಲಿ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮ

    ಕನಕಗಿರಿ: ತಾಲೂಕಿನ ನವಲಿಯ ಭೋಗಾಪುರೇಶ ದೇಗುಲ ಜೀರ್ಣೋದ್ಧಾರವಾಗಬೇಕಿದೆ ಎಂದು ಶ್ರೀ ಸುವಿದ್ಯೇಂದ್ರ ತೀರ್ಥರು ಹೇಳಿದರು.

    ಭೋಗಾಪುರೇಶ ದೇಗುಲ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ತುಲಾಭಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಭೋಗಾಪುರೇಶ ಮೂರ್ತಿಯನ್ನು ವ್ಯಾಸರಾಜರು ಪ್ರತಿಷ್ಠಾಪಿಸಿದ್ದು, ಇತಿಹಾಸವನ್ನು ಸಂರಕ್ಷಿಸುವ ಸಲುವಾಗಿ ದೇಗುಲದ ನವೀಕರಣವಾಗಬೇಕಾಗಿದೆ. ಶ್ರೀಮಠದ ಜತೆಗೆ ಭಕ್ತರು ಸಹಕರಿಸಿದರೆ ದೇಗುಲವನ್ನು ಹಂತ-ಹಂತವಾಗಿ ಅಭಿವೃದ್ಧಿಗೊಳಿಸಬಹುದು ಎಂದರು.

    ಭಕ್ತಿಯಿಂದ ಸೇವೆ ಮಾಡಿದರೆ ಭಗವಂತ ಅನುಗ್ರಹಿಸುತ್ತಾನೆ. ಪರಮಾತ್ಮನ ಧ್ಯಾನದಿಂದ ಮನುಜ ಮೋಕ್ಷ ಹೊಂದುತ್ತಾನೆ. ಭಕ್ತಿ ಮತ್ತು ಮೋಕ್ಷ ಬದುಕಿನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಸುವಿದ್ಯೇಂದ್ರ ತೀರ್ಥರು ತಿಳಿಸಿದರು. ಶ್ರೀಗಳಿಗೆ ತರಕಾರಿ, ಧಾನ್ಯ, ಹಣ್ಣು, ನಾಣ್ಯ ಹಾಗೂ ಸುಳಾದಿಗಳ ಗ್ರಂಥಗಳಿಂದ ತುಲಾಭಾರ ಮಾಡಲಾಯಿತು. ಕನಕಾಚಲ ಭಜನಾ ಸಂಘದವರಿಂದ ದಾಸವಾಣಿ ಹಾಗೂ ಭಜನೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts