More

    ಜಾತಿಯತೆ ದೂರ ಮಾಡಲು ಶ್ರಮಿಸಿದ ಮಹಾನ ಸಂತ ಕನಕದಾಸರು: ಪ್ರಕಾಶ ಕೋಳಿವಾಡ

    ರಾಣೆಬೆನ್ನೂರ: ಕನಕದಾಸರು 15ನೇ ಶತಮಾನದಲ್ಲಿಯೇ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿದ್ದ ಜಾತಿಯತೆಯನ್ನು ಹೊಡೆದೊಡಿಸಲು ಶ್ರಮಿಸಿದ ಮಹಾನ ಸಂತರಾಗಿದ್ದರು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
    ನಗರದ ನೆಹರು ಮಾರ್ಕೆಟ್ ವರ್ತಕರ ಸಂಘದ ಸಮುದಾಯ ಭವನದಲ್ಲಿ ಗುರುವಾರ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಕನಕದಾಸರ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಸಮಾಜದಲ್ಲಿ ಬಹಳಷ್ಟು ಶೋಷಣೆಗೆ ಒಳಗಾಗಿದ್ದರೂ ಅದಾವುದನ್ನು ತಲೆಕೆಡಿಸಿಕೊಳ್ಳದೆ ಕನಕದಾಸರು ಜಾತಿಯತೆಯ ವಿರುದ್ಧ ಹೋರಾಡಿದರು. ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ ಸಿಗದಿರುವುದಕ್ಕೆ ಧೃತಿಗೆಡದೆ ಭಕ್ತಿಯಿಂದ ಭಗವಂತನನ್ನು ಪ್ರಾರ್ಥಿಸಿ ಆತನನ್ನು ತಮ್ಮತ್ತ ತಿರುಗುವಂತೆ ಮಾಡಿ ಶ್ರೇಷ್ಠ ಭಕ್ತನಾಗಿ ಗುರುತಿಸಿಲ್ಪಟ್ಟರು. ಇಂತಹ ಶ್ರೇಷ್ಠ ವ್ಯಕ್ತಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಸಮಾಜದ ಎಲ್ಲ ವರ್ಗದ ಜನರು ಅವರ ಜಯಂತಿ ಆಚರಿಸುವಂತಾಗಬೇಕು ಎಂದರು.
    ಸಮಾರಂಭಕ್ಕೂ ಮುನ್ನ ನಗರದ ತಾಲೂಕು ಆಡಳಿತ ಸೌಧದ ಬಳಿಯಿಂದ ಹೊರಟ ಕನಕದಾಸರ ಭಾವಚಿತ್ರದ ಮೆರವಣಿಗೆಯು ಕುರುಬಗೇರಿ ಕ್ರಾಸ್ ಮಾರ್ಗವಾಗಿ ಸಮಾರಂಭದ ಸ್ಥಳಕ್ಕೆ ಬಂದು ಸೇರಿತು.
    ಮಾಜಿ ಶಾಸಕ ಅರುಣಕುಮಾರ ಪೂಜಾರ, ತಹಸೀಲ್ದಾರ್ ಹನುಮಂತಪ್ಪ ಶಿರಹಟ್ಟಿ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಹುಚ್ಚಪ್ಪ ಮೆಡ್ಲೇರಿ, ರಮೇಶ ಕರಡೆಣ್ಣನವರ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚೋಳಪ್ಪ ಕಸವಾಳ, ಮೃತ್ಯುಂಜಯ ಗುದಿಗೇರ, ಕೃಷ್ಣಪ್ಪ ಕಂಬಳಿ, ಬಿ.ಪಿ. ಶಿಡೇನೂರ, ಕಿರಣ ಗುಳೆದ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ತಾಪಂ ಇಓ ಸುಮಲತಾ ಎಸ್.ಪಿ., ಟಿಎಚ್‌ಒ ರಾಜೇಶ್ವರಿ ಕದರಮಂಡಲಗಿ, ನಗರಸಭೆ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts